ಮುಸ್ಲಿಮ್ ವ್ಯಕ್ತಿಯ ಜ್ಯೂಸ್ ಅಂಗಡಿ ಬಂದ್ ಮಾಡಿದ ಸಂಘಪರಿವಾರ

Prasthutha|

ಲಕ್ನೋ: ಲವ್ ಜಿಹಾದ್ ಗೆ ಉತ್ತೇಜಿಸುತ್ತಿದ್ದಾನೆ ಎಂದು ಆರೋಪಿಸಿ ಹಿಂದುತ್ವ ಗೂಂಡಾಗಳು ಮುಸ್ಲಿಮ್ ವ್ಯಕ್ತಿ ನಡೆಸುತ್ತಿದ್ದ ಜ್ಯೂಸ್ ಮಾರಾಟದ ಅಂಗಡಿಯನ್ನು ಬಲವಂತವಾಗಿ ಮುಚ್ಚಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ.

- Advertisement -

ಉತ್ತರ ಪ್ರದೇಶದ ಮೊರಾದಾಬಾದ್ ನ ಬುಧಿ ವಿಹಾರ್ ಪ್ರದೇಶದಲ್ಲಿ ಅಂಗಡಿ ನಡೆಸುತ್ತಿದ್ದ ಶಾಬು ಅವರ ಅಂಗಡಿಯ ಮುಂಭಾಗ ಬಜರಂಗದಳದ ಪುಂಡರು ಜಮಾಯಿಸಿ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿ ಅಂಗಡಿ ಬಂದ್ ಮಾಡಿದರು.ಬಜರಂಗದಳದ ಕಾರ್ಯಕರ್ತರು ಬಲವಂತವಾಗಿ ಅಂಗಡಿಯ ಶಟರ್ ಮುಚ್ಚಿ ಒಂದು ಗಂಟೆ ಘೋಷಣೆಗಳನ್ನು ಕೂಗಿದರು.

ಈ ಪ್ರದೇಶದಲ್ಲಿ ಶಾಬು, ಲವ್ ಜಿಹಾದ್ ಉತ್ತೇಜಿಸುತ್ತಿದ್ದಾನೆ ಎಂದು ಬಜರಂಗದಳದ ಸದಸ್ಯರು ಆರೋಪಿಸಿದರು. “ಆ ವ್ಯಕ್ತಿ ನಿಜವಾಗಿಯೂ ಜ್ಯೂಸ್ ಸೆಂಟರ್ ಸೋಗಿನಲ್ಲಿ ಹಿಂದೂ ಪ್ರದೇಶಗಳಲ್ಲಿ ಲವ್ ಜಿಹಾದ್ ನಡೆಸುತ್ತಿದ್ದಾನೆ” ಎಂದು ಅವರು ಆರೋಪಿಸಿದರು.

- Advertisement -

ಹಿಂದೂ ಬಾಹುಳ್ಯದ ಪ್ರದೇಶಗಳಲ್ಲಿ ಜ್ಯೂಸ್ ಅಂಗಡಿ ನಡೆಸಂದತೆ ಬಜರಂಗದಳದ ಸದಸ್ಯರು ಯುವಕನಿಗೆ ಬೆದರಿಕೆ ಹಾಕಿದ್ದಾರೆ. ಅಂಗಡಿ ಬಂದ್ ಮಾಡದಿದ್ದರೆ ಅದನ್ನು ಬಂದ್ ಮಾಡಲು ಅಭಿಯಾನ ಆರಂಭಿಸುವುದಾಗಿ ಅವರು ಬೆದರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Join Whatsapp