Home ಟಾಪ್ ಸುದ್ದಿಗಳು ಸ್ಪೀಕರ್ ಯು.ಟಿ ಖಾದರ್ ಭೇಟಿಯಾಗಿ ಮನವಿ ಸಲ್ಲಿಸಿದ ಅಡ್ಯಾರ್ ಪಂಚಾಯತ್ ಅಧ್ಯಕ್ಷರ ನೇತೃತ್ವದ ನಿಯೋಗ

ಸ್ಪೀಕರ್ ಯು.ಟಿ ಖಾದರ್ ಭೇಟಿಯಾಗಿ ಮನವಿ ಸಲ್ಲಿಸಿದ ಅಡ್ಯಾರ್ ಪಂಚಾಯತ್ ಅಧ್ಯಕ್ಷರ ನೇತೃತ್ವದ ನಿಯೋಗ

ಮಂಗಳೂರು: ಅಡ್ಯಾರ್ ಪಂಚಾಯತ್ ಅಧ್ಯಕ್ಷ ಯಾಸೀನ್ ಜಲೀಲ್ ನೇತೃತ್ವದ ನಿಯೋಗವು ಸಭಾಧ್ಯಕ್ಷ ಯು.ಟಿ ಖಾದರ್ ರನ್ನು ಭೇಟಿ ಮಾಡಿ ಮನವಿ ನೀಡಿದೆ.


ಗ್ರಾಮ ಮಟ್ಟದಲ್ಲಿ ವಿತರಣೆ ಆಗುತ್ತಿದ್ದ 9/11 ಹಾಗೂ ಸಿಂಗಲ್ ಸೈಟ್ ದಾಖಲೆಗಳನ್ನು ಕೆಲವು ತಿಂಗಳ ಹಿಂದೆ ಸರಕಾರವು ಮೂಡಾಗೆ ವರ್ಗಾಯಿಸಲಾಗಿದೆ. ಆದುದರಿಂದ ಸಾರ್ವಜನಿಕರು ಅನುಭವಿಸುತ್ತಿವ ಸಮಸ್ಯೆಯನ್ನು ಸವಿವರವಾಗಿ ವಿವರಿಸಲಾಯಿತು.
ಗ್ರಾಮೀಣ ಮಟ್ಟದಲ್ಲಿ ಈ ಮೊದಲು ಇದ್ದ ಹಾಗೆ ಸ್ಥಳೀಯ ಪಂಚಾಯತ್ ಮೂಲಕ 9/11 ಹಾಗೂ ಸಿಂಗಲ್ ಸೈಟ್ ಗಳ ವಿತರಿಸುವ ನಿಯಮವನ್ನು ಮುಂದುವರಿಸುವಂತೆ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಅಬ್ದುಲ್ ಸತ್ತಾರ್ ಹಾಗೂ ಸದಸ್ಯರಾದ ಅಬ್ದುಲ್ ರಜಾಕ್ ಅಡ್ಯಾರ್ ಉಪಸ್ಥಿತರಿದ್ದರು.

Join Whatsapp
Exit mobile version