ಶಾಲಾ ಬಾಲಕಿಯರಿಗೆ ಕಿರುಕುಳ; ಕಾನ್‌ಸ್ಟೆಬಲ್ ಅರೆಸ್ಟ್

Prasthutha|

ಕೊಡಗು:  ಶಾಲಾ ಬಾಲಕಿಯರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇರೆಗೆ ಕಾನ್‌ಸ್ಟೆಬಲ್ ಅನ್ನು ಬಂಧಿಸಿದ ಘಟನೆ ವಿರಾಜಪೇಟೆಯ ಒಂಟಿಯಂಗಡಿ ಗ್ರಾಮದಲ್ಲಿ ನಡೆದಿದೆ.

- Advertisement -

ಆರೋಪಿಯನ್ನು ಅಮ್ಮತ್ತಿಯ ಪೊಲೀಸ್ ಉಪಠಾಣೆಯ ಕಾನ್‌ಸ್ಟೆಬಲ್ ಚಂದ್ರಶೇಖರ್ (27) ಎಂದು ಗುರುತಿಸಲಾಗಿದೆ.

‘ಮೈಸೂರಿನ ಆಲನಹಳ್ಳಿ ನಿವಾಸಿಯಾದ ಈತ 6 ತಿಂಗಳ ಹಿಂದೆಯಷ್ಟೆ ಕರ್ತವ್ಯಕ್ಕೆ ಸೇರಿದ್ದ. ಕೆಲವು ದಿನಗಳಿಂದ ಹಿಂಬಾಲಿಸುವುದು, ಕೈ ಸನ್ನೆ ಮಾಡುವುದು, ಅಸಭ್ಯವಾಗಿ ವರ್ತಿಸುವುದು, ಮೊಬೈಲ್‌ನಲ್ಲಿ ಫೋಟೋ, ವೀಡಿಯೋಗಳನ್ನು ತೆಗೆಯಲು ಯತ್ನಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಗ್ರಾಮಸ್ಥರ ಬಳಿ ದೂರಿದ್ದರು. ಬಾಲಕಿಯರು ತೆರಳುತ್ತಿದ್ದ ಆಟೊವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಈತನನ್ನು ಗ್ರಾಮಸ್ಥರೇ ಹಿಡಿದು ಕೂಡಿ ಹಾಕಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಸ್ಥಳಕ್ಕೆ ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಬಂದು ಗ್ರಾಮಸ್ಥರ ಮನವೊಲಿಸಿದರು. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಯಿತು ಎಂದು ಹೇಳಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp