ಕೊಡಗು: ಹಿರಿಯ ಪತ್ರಕರ್ತರ ಬಿ.ಎನ್ ಮನು ಶೆಣೈ ನಿಧನ

Prasthutha|

ಮಡಿಕೇರಿ: ಹಿರಿಯ ಪತ್ರಕರ್ತ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಸಮಾಚಾರ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಪ್ರಗತಿಪರ ಚಿಂತಕರೂ ಆಗಿದ್ದ ಬಿ.ಎನ್ ಮನು ಶೆಣೈ (64) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

- Advertisement -

ಚಿಂತಕ ಹಾಗೂ ಹೋರಾಟಗಾರರಾಗಿದ್ದ ದಿವಂಗತ ಎ.ಕೆ ಸುಬ್ಬಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಸಂಜೆ 6 ಗಂಟೆಗೆ ವಿರಾಜಪೇಟೆಯಲ್ಲಿ ನಡೆಯಲಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



Join Whatsapp