ಆಂಧ್ರಪ್ರದೇಶ: ಟಿಡಿಪಿ ನಾಯಕನ ನಿವಾಸದ ಗಡಿ ಗೋಡೆ ಧ್ವಂಸಗೈದ ಮುನ್ಸಿಪಾಲಿಟಿ

Prasthutha|

ವಿಶಾಖಪಟ್ಟಣಂ: ಆಂಧ್ರಪ್ರದೇಶದ ನರಸೀಪಟ್ಟಣಂ ಪಟ್ಟಣದಲ್ಲಿ ಮುನ್ಸಿಪಲಿಟಿ ಅಧಿಕಾರಿಗಳು ಮಾಜಿ ರಾಜ್ಯ ಸಚಿವ ಮತ್ತು ಟಿಡಿಪಿಯ (ತೆಲುಗು ದೇಶಂ ಪಾರ್ಟಿ) ಹಿರಿಯ ನಾಯಕ ಅಯ್ಯಣ್ಣ ಪತ್ರುಡು ಅವರ ನಿವಾಸದ ಅನಧಿಕೃತ ಗಡಿ ಗೋಡೆಯನ್ನು ಕೆಡವಿದ್ದಾರೆ.

- Advertisement -

ಕುಟುಂಬಸ್ಥರ ವಿರೋಧದ ನಡುವೆಯೂ ಮಾಜಿ ಸಚಿವರ ನಿವಾಸದ ಗಡಿ ಗೋಡೆಯನ್ನು ಪೊಲೀಸ್ ಬಂದೋಬಸ್ತ್ ಮೂಲಕ ಕೆಡವಲಾಯಿತು. ಅಲ್ಪ ಸಮಯದವರೆಗೆ ನಿವಾಸದ ಸುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಧ್ವಂಸ ಕಾರ್ಯ ನಡೆಸುತ್ತಿರುವ ಪಾಲಿಕೆ ನೌಕರರ ಮನವಿ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp