ಬಿಜೆಪಿ ದೇಶವನ್ನು ಹಾಳು ಮಾಡಿದೆ, ಭಾರತವನ್ನು ಒಗ್ಗೂಡಿಸಬೇಕಾದ ಸಮಯ ಸನ್ನಿಹಿತವಾಗಿದೆ: ರಾಹುಲ್ ಗಾಂಧಿ

Prasthutha|

ನವದೆಹಲಿ: ದ್ವೇಷದಿಂದ ದ್ವೇಷ  ಮಾತ್ರ ಹುಟ್ಟಲು ಸಾಧ್ಯ. ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು ಭ್ರಾತೃತ್ವ ಮತ್ತು ಪ್ರೀತಿ ನೆಲೆಸಬೇಕು.  ಭಾರತವನ್ನು ಒಗ್ಗೂಡಿಸಬೇಕಾದ ಸಮಯ ಸನ್ನಿಹಿತವಾಗಿದೆ  ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

- Advertisement -

ಈ ಬಗ್ಗೆ ಟ್ವಿಟರ್ ನಲ್ಲಿ #BharatJodo ಹ್ಯಾಷ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿರುವ ಅವರು ‘ದ್ವೇಷವು ದ್ವೇಷವನ್ನು ಮಾತ್ರ ಹುಟ್ಟುಹಾಕುತ್ತದೆ. ಪ್ರೀತಿ ಮತ್ತು ಸಹೋದರತ್ವದ ಮಾರ್ಗ ಮಾತ್ರ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯಬಲ್ಲದು. ಭಾರತವನ್ನು ಒಗ್ಗೂಡಿಸಬೇಕಾದ ಸಮಯ ಬಂದಿದೆ’ ಎಂದು ಅವರು  ಹೇಳಿದ್ದಾರೆ.

ಬಿಜೆಪಿ ದೇಶವನ್ನು ಹಾಳು ಮಾಡಿದೆ, ದೇಶದಲ್ಲಿ ದ್ವೇಷವನ್ನು ಹರಡುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ , ನೀವು ದೇಶವನ್ನು ಉಳಿಸಲು ಬಯಸುವಿರಾದರೆ ‘ಜೋಡೋ ಭಾರತ್’ ಜತೆ ಬನ್ನಿ ಎಂದು ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿಯೂ ಟ್ವೀಟ್ ಮಾಡಿದೆ.



Join Whatsapp