ಹಿರಿಯಡ್ಕ ಠಾಣೆಯಲ್ಲಿ ರೌಡಿ ಶೀಟರ್ ಗಳಿಂದಲೇ ಪೊಲೀಸ್ ಅಧಿಕಾರಿಗೆ ಸನ್ಮಾನ !

Prasthutha|

ದನದ ವ್ಯಾಪಾರಿ ಹುಸೈನಬ್ಬ ಜೋಕಟ್ಟೆ ಕೊಲೆ ಆರೋಪಿಗಳು

- Advertisement -

ದನದ ವ್ಯಾಪಾರಿ ಹುಸೇನ್ ಜೋಕಟ್ಟೆ  ಕೊಲೆ ಪ್ರಕರಣದ ಆರೋಪಿಗಳಿಂದ ಉಡುಪಿಯ ಹಿರಿಯಡ್ಕ ಠಾಣಾ ಎಸ್ಐ ಸನ್ಮಾನಿಸಲ್ಪಟ್ಟ ಘಟನೆ ನಡೆದಿದೆ. ಆರೋಪಿಗಳಾಗಿರುವ  ಪ್ರಸಾದ್ ಕೊಂಡಾಡಿ ಹಾಗೂ ಉಮೇಶ್ ಶೆಟ್ಟಿ ಎನ್ನುವವರಿಂದ ಎಸ್ಐ ಹಿರಣ್ಣ ಸನ್ಮಾನ ಮಾಡಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಇತ್ತೀಚೆಗಷ್ಟೆ ಹಿಂದೂ ಜಾಗರಣ ವೇದಿಕೆವತಿಯಿಂದ ಹಿರಿಯಡ್ಕ ಠಾಣೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಝರ್ ವಿತರಣೆ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ  ಕೋವಿಡ್ ನಿಯಾಮಳಿಗಳನ್ನೂ ಗಾಳಿಗೆ ತೂರಿ ರೌಡಿಶೀಟರ್ ಗಳಿಂದಲೇ ಎಸ್ಐ ಒಬ್ಬರು ಸನ್ಮಾನಿಸಲ್ಪಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಎರಡು ವರ್ಷಗಳ ಹಿಂದೆ  ದನದ ವ್ಯಾಪಾರಿಯಾಗಿದ್ದ ಹುಸೇನ್ ಜೋಕಟ್ಟೆ ಅವರನ್ನು ಹಿರಿಯಡ್ಕಾ ಠಾಣಾ ವ್ಯಾಪ್ತಿಯಲ್ಲಿ ತಂಡವೊಂದು ತಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ನಡೆಸಿತ್ತು. ಈ  ಕೊಲೆ ಪ್ರಕರಣಕ್ಕೆ ಸಂಬಂಧಿಸಿ  8 ಮಂದಿ ಭಜರಂಗದಳದ ಸದಸ್ಯರು ಮತ್ತು ಕರ್ತವ್ಯ ಲೋಪವೆಸಗಿದ 3 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು.  ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸ್ ಅಧಿಕಾರಿಯನ್ನೇ ಸನ್ಮಾನಿಸಿದ್ದು,  ಇವರೀರ್ವರೂ ಅದೇ ಠಾಣೆಯಲ್ಲಿ ರೌಡಿ ಶೀಟರ್ ಗಳು ಎನ್ನುವುದು ಮಹತ್ವದ ಅಂಶವಾಗಿದೆ.

Join Whatsapp