ಸೌದಿ ಅರೇಬಿಯಾದಲ್ಲಿ ಅಪಘಾತ | ಆಸ್ಪತ್ರೆ ದಾಖಲಾಗಿದ್ದ ಮಂಗಳೂರು ಮೂಲದ ಮಗು ಸಾವು

Prasthutha|

ಮಂಗಳೂರು : ಸೌದಿ ಅರೇಬಿಯಾದಲ್ಲಿ ಕಳೆದ ವಾರ ನಡೆದಿದ್ದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಕರಾವಳಿ ಮೂಲದ ಒಂದು ವರ್ಷದ ಮಗು ನಿನ್ನೆ ರಿಯಾಧ್‌ ನ ನ್ಯಾಶನಲ್‌ ಗಾರ್ಡ್‌ ಆಸ್ಪತ್ರೆಯಲ್ಲಿ ಸಾವಿಗೀಡಾಗಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಎನ್‌ ಆರ್‌ ಐ ಆದಿಲ್ ಮತ್ತು ಅವರ ಪತ್ನಿ, ಇಬ್ಬರು ಮಕ್ಕಳೊಂದಿಗೆ ಜಿಝಾನ್‌ ನಗರದಿಂದ ದಮ್ಮಾಮ್‌ ಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಬೆಳಗ್ಗೆ ಸುಮಾರು ೮ ಗಂಟೆಗೆ ರಿಯಾಧ್‌ ನಿಂದ ಸುಮಾರು ೫೦ ಕಿ.ಮೀ. ದೂರದಲ್ಲಿನ ಚೆಕ್‌ ಪಾಯಿಂಟ್ ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಉರುಳಿತ್ತು.

ಕಿರಿಯ ಮಗು ಒವೈಸ್‌ ಆದಿಲ್‌ ಗಂಭೀರ ಗಾಯಗೊಂಡಿದ್ದನು. ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಮಗುವಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಮಗುವಿನ ತಂದೆ ಆದಿಲ್‌ ದಮ್ಮಾಮ್‌ ನಲ್ಲಿ ಟ್ರಾವೆಲ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈದ್‌ ರಜೆ ಹಿನ್ನೆಲೆಯಲ್ಲಿ ಅವರು ಕುಟುಂಬ ಸಮೇತ ತಿರುಗಾಡಲು ತೆರಳಿದ್ದರು. ಆದಿಲ್‌ ಮಂಗಳೂರು ಹೊರವಲಯದ ಮೂಡುಬಿದಿರೆಯ ಗಂಟಾಲ್‌ ಕಟ್ಟೆ ಮೂಲದವರು.

Join Whatsapp