ಮಂಗಳೂರು | ಮೀನುಗಾರಿಕಾ ದೋಣಿ ದುರಂತ; 10 ಮಂದಿಯ ರಕ್ಷಣೆ

Prasthutha|

ಮಂಗಳೂರು : ಉಳ್ಳಾಲದಲ್ಲಿ ಮೀನುಗಾರಿಕಾ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ದೋಣಿಯಲ್ಲಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ.

- Advertisement -

ಮೇ 23ರ ರವಿವಾರ ಮುಂಜಾನೆ ಇಲ್ಲಿನ ಕೋಡಿಯಲ್ಲಿ ಮೀನುಗಾರಿಕಾ ದೋಣಿ ಅಪಘಾತಕ್ಕೀಡಾಗಿದೆ.

ರವಿವಾರ ನಸುಕಿನ ವೇಳೆ ಸುಮಾರು 1.30ಕ್ಕೆ ಉಳ್ಳಾಲ ಮೂಲದ ಅಶ್ರಫ್‌‌ ಅವರಿಗೆ ಸೇರಿದ್ದ ಅಜಾನ್‌ ಎಂಬ ಮೀನುಗಾರಿಕಾ ದೋಣಿ ದಡದಿಂದ ಹೊರಟಿತ್ತು.

- Advertisement -

ಕನ್ಯಾಕುಮಾರಿಯ ಐವರು ಮೀನುಗಾರರು ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ದೋಣಿ ನಡೆಸಲು ಸಹೋದ್ಯೋಗಿಯೊಬ್ಬರಿಗೆ ಅವಕಾಶ ನೀಡಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ವೇಳೆ ಮೀನುಗಾರಿಕಾ ದೋಣಿ ಅಪಘಾತಕ್ಕೀಡಾಗಿದ್ದು, ಹತ್ತು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Join Whatsapp