ಬಿಜೆಪಿ ಪರ ಕೆಲಸ ಮಾಡುತ್ತಿದ್ದವರನ್ನೇ ಪ್ರಶ್ನಿಸಿ ಮತಗಟ್ಟೆ ಸಮೀಕ್ಷೆ: ಅಖಿಲೇಶ್ ಯಾದವ್

Prasthutha|

ಲಖನೌ: ಮತಗಟ್ಟೆ ಸಮೀಕ್ಷೆ ವೇಳೆ ಬಿಜೆಪಿ ಪರ ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿರುವವರ ಬಳಿಯೇ ಪ್ರಶ್ನೆ ಕೇಳಿ, ಉತ್ತರ ಪಡೆದು ವರದಿ ಸಿದ್ಧಪಡಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದಾರೆ.

- Advertisement -


ಬಿಜೆಪಿ ಪರವಾದ ವಾತಾವರಣ ತೋರಿಸಲು ಈ ರೀತಿಯ ವರದಿ ನೀಡಲಾಗಿದೆ ಎಂದು ದೂರಿದ್ದಾರೆ.


ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿಯಾ ಬಣದ ಗೆಲುವು ದೇಶದ ಗೆಲುವಾಗಿದೆ. ಜನರ ಗೆಲುವಾಗಿದೆ ಎಂದಿದ್ದಾರೆ.

- Advertisement -


‘ನಾವು ಮತ್ತು ನೀವು(ಮಾಧ್ಯಮದವರು) ಸೇರಿ ಪ್ರಜಾಪ್ರಭುತ್ವ ಬಲಪಡಿಸಬೇಕಿದೆ. ಬಿಜೆಪಿಯ ರ್ಯಾಲಿಗಳು ಜನರಿಲ್ಲದೆ ಭಣಗುಡುತ್ತಿದ್ದವು. ಅವರ ಟೆಂಟ್ ಗಳು ಖಾಲಿ ಇರುತ್ತಿದ್ದವು. ಅವರ ಪರವಾಗಿ ಯಾವುದೇ ವಾತಾವರಣ ಇರಲಿಲ್ಲ’ ಎಂದು ಅಖಿಲೇಶ್ ಹೇಳಿದ್ದಾರೆ.



Join Whatsapp