ರೈತರನ್ನು ಭಯೋತ್ಪಾದಕರು, ಕ್ರಿಕೆಟಿಗನ ನಾಯಿ ಎಂದ ಕಂಗನಾ ಟ್ವೀಟ್ ಅಳಿಸಿ ಹಾಕಿದ ಟ್ವಿಟರ್

Prasthutha|

ನವದೆಹಲಿ : ಬಿಜೆಪಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ಬಿಜೆಪಿ ಬೆಂಬಲಿಗ ನಟಿ ಕಂಗನಾ ರಣಾವತ್ ಮಾಡಿದ್ದ ಎರಡು ವಿವಾದಾತ್ಮಕ ಟ್ವೀಟ್ ಗಳನ್ನು ಟ್ವಿಟರ್ ಅಳಿಸಿ ಹಾಕಿದೆ.

- Advertisement -

ರೈತರ ಪ್ರತಿಭಟನೆಗೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹತಾಶೆಗೊಳಗಾಗುತ್ತಿರುವ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವೈಯಕ್ತಿಕ ಟೀಕೆಗಳನ್ನು ನಿರತರಾಗಿದ್ದಾರೆ.

ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕಂಗನಾರ ಟ್ವೀಟ್ ಅಳಿಸಲಾಗಿದೆ.

- Advertisement -

ಕಂಗನಾ ಗುರುವಾರ ಟ್ವೀಟ್ ಮಾಡಿದ್ದ ಎರಡು ಟ್ವೀಟ್ ಗಳನ್ನು ಅಳಿಸಲಾಗಿದೆ. ಈ ಟ್ವೀಟ್ ಗಳಲ್ಲಿ ಕಂಗನಾ ರೈತರನ್ನು ಭಯೋತ್ಪಾದಕರು ಮತ್ತು ಕ್ರಿಕೆಟಿಗರೊಬ್ಬರನ್ನು ನಾಯಿಗಳಿಗೆ ಹೋಲಿಸಿ ಟ್ವೀಟ್ ಮಾಡಿದ್ದರು.

Join Whatsapp