50 ಟ್ರಾಕ್ಟರ್ ಗಳಲ್ಲಿ ಕೆಂಪುಕೋಟೆ ತಲುಪಿದ ರೈತರು

Prasthutha|

ನವದೆಹಲಿ : ಬೆಳಗ್ಗೆ ಗಾಝಿಪುರದಿಂದ ಟ್ರ್ಯಾಕ್ಟರ್‌ ಮೂಲಕ ಹೊರಟ ರೈತರ ಒಂದು ಗುಂಪು ಯಾವುದೇ ಅಡ್ಡಿಗಳಿಲ್ಲದೆ 12.15ಕ್ಕೆ ಕೆಂಪುಕೋಟೆ ತಲುಪಿದೆ.

- Advertisement -

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆ ಅತಿ ಮುಖ್ಯ ಕೇಂದ್ರವಾಗಿದ್ದು, ಪ್ರಧಾನಿಗಳ ಗಣತಂತ್ರ ಪರೇಡ್‌ ಹಾಗೂ ದೇಶವನ್ನುದ್ದೇಶಿಸಿ ಇಲ್ಲಿಂದಲೇ ಭಾಷಣ ಮಾಡಿದ್ದಾರೆ.

ಈ ಸ್ಥಳವನ್ನು ರೈತರು 50ಕ್ಕೂ ಹೆಚ್ಚು ಟ್ರಾಕ್ಟರ್‌ ಗಳಲ್ಲಿ ತಲುಪಿದ್ದಾರೆ. ಟ್ರಾಕ್ಟರ್ ಪರೇಡ್‌ ತಡೆಯಲು ಹಾಕಿದ್ದ ಬ್ಯಾರಿಕೇಡ್‌ ಗಳನ್ನು ಮುರಿದು ಕೆಂಪುಕೋಟೆ ಪ್ರದೇಶವನ್ನು ಪ್ರವೇಶಿಸಿದ್ದು, ಪೊಲೀಸರು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವ ಪ್ರಯತ್ನ ಮಾಡಿಲ್ಲ.

- Advertisement -

ಇನ್ನು ಕೆಲವೇ ಹೊತ್ತಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಈ ಪ್ರದೇಶವನ್ನು ತಲಪುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

Join Whatsapp