Home ಟಾಪ್ ಸುದ್ದಿಗಳು ಪೂಜೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್ ನದಿಗೆ ಪಲ್ಟಿ: 9 ಮಂದಿ ಸಾವು, ಕೆಲವರು ನಾಪತ್ತೆ

ಪೂಜೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್ ನದಿಗೆ ಪಲ್ಟಿ: 9 ಮಂದಿ ಸಾವು, ಕೆಲವರು ನಾಪತ್ತೆ

ಸಹರಾನ್ ಪುರ: ಧಮೋಲಾ ನದಿಗೆ ಟ್ರ್ಯಾಕ್ಟರ್ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಸಹರಾನ್ ಪುರ ಜಿಲ್ಲೆಯ ಕೊತ್ವಾಲಿ ದೇಹತ್ ಪ್ರದೇಶದಲ್ಲಿ ನಡೆದಿದೆ.


ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇದೇ ವೇಳೆ, ಸರ್ಕಾರ ಮೃತ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.


ಸಹರಾನ್ ಪುರದಲ್ಲಿ ಜಹರವೀರ್ ಗೋಗಾ ಪೂಜೆ ನಡೆಯುತ್ತಿದೆದ್ದು, ಅಲ್ಲಿಗೆ 50 ಭಕ್ತರಿದ್ದ ಟ್ರ್ಯಾಕ್ಟರ್ ತೆರಳುತ್ತಿತ್ತು. ಧಮೋಲಾ ನದಿ ದಡದಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ಅದರ ಟ್ರಾಲಿ ನದಿಗೆ ಜಾರಿ ಬಿದ್ದಿದೆ. ಇದರಿಂದ ಅಷ್ಟೂ ಜನರು ನದಿ ನೀರಿನಲ್ಲಿ ಮುಳುಗಿದ್ದಾರೆ. ಕೆಲವರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದರೆ. ಇನ್ನೂ ಕೆಲವರು ಟ್ರಾಲಿ ಒಳಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

Join Whatsapp
Exit mobile version