Home ಟಾಪ್ ಸುದ್ದಿಗಳು ಅರ್ಚನಾ ರೆಡ್ಡಿ ಕೊಲೆ ಪ್ರಕರಣ: ಪುತ್ರಿ, ಪತಿ ಸೇರಿ 7 ಮಂದಿ ಸೆರೆ

ಅರ್ಚನಾ ರೆಡ್ಡಿ ಕೊಲೆ ಪ್ರಕರಣ: ಪುತ್ರಿ, ಪತಿ ಸೇರಿ 7 ಮಂದಿ ಸೆರೆ

ಬೆಂಗಳೂರು: ಹೊಸರೋಡ್ ಸಿಗ್ನಲ್ ಬಳಿ ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಮಹಿಳೆಯನ್ನು ಕೊಲೆಗೈದ ಪ್ರಕರಣ  ಸಂಬಂಧ ಕೊಲೆಯಾದ ಮಹಿಳೆಯ ಪುತ್ರಿ ಯುವಿಕಾ ಎಂಬಾಕೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಜಿಗಣಿ ಮೂಲದ ಬೆಳ್ಳಂದೂರಿನಲ್ಲಿ ವಾಸವಿದ್ದ ಅರ್ಚನಾ ರೆಡ್ಡಿ (42)ಯನ್ನು ಕಳೆದ  ಡಿ.27ರಂದು ರಾತ್ರಿ ಕೊಲೆಗೈದ ಪ್ರಕರಣದ ಸಂಬಂಧ ಆಕೆಯ ಪುತ್ರಿ ಯುವಿಕಾ ರೆಡ್ಡಿ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ಯುವಿಕಾ ರೆಡ್ಡಿ 5ನೇ ಆರೋಪಿಯಾಗಿದ್ದರೆ, ಮೊದಲ ಆರೋಪಿ ನವೀನ್ ಕುಮಾರ್ (ಅರ್ಚನಾ ಮೂರನೇ ಪತಿ) ಆಗಿದ್ದಾನೆ.

ಉಳಿದ ಆರೋಪಿಗಳಾದ ಬಂಧಿತ ಸಂತೋಷ್, ಅನೂಪ್, ಆನಂದ್ , ನರೇಂದ್ರ ಹಾಗೂ  ದೀಪು  ಮೊದಲ ಆರೋಪಿ ನವೀನ್ ನ ಸ್ನೇಹಿತರಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಹೊಸರೋಡ್ ಸಿಗ್ನಲ್ ಬಳಿ  ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾ ರೆಡ್ಡಿಯನ್ನು ಡಿ. 27ರಂದು ರಾತ್ರಿ 10.30ರ ವೇಳೆ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಿಸಿ ಟಿವಿ ಆಧಾರದ ಮೇಲೆ ಈ ಕೊಲೆ ಪ್ರಕರಣ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ತನಿಖೆಯಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಸಂಬಂಧ ಇದೀಗ ಏಳು ಆರೋಪಿಗಳನ್ನು ಬಂಧಿಸಿದ್ದೇವೆ. ಆಸ್ತಿಯನ್ನು ಕಬಳಿಸಲು ಈ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ.

ಮೊದಲ ಆರೋಪಿ ಹಾಗೂ ಕೊಲೆಯಾದ ಅರ್ಚನಾ ಪತಿ-ಪತ್ನಿಯರಾಗಿದ್ದರು. ಕೊಲೆ ಪ್ರಕರಣದಲ್ಲಿ ಕೊಲೆಯಾದಾಕೆಯ ಮಗಳೂ ಕೂಡ ಆರೋಪಿಯಾಗಿದ್ದಾಳೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದಿದ್ದಾರೆ

Join Whatsapp
Exit mobile version