ಉತ್ತರ ಪ್ರದೇಶ | ಆರು ಮಂದಿ ಮುಸ್ಲಿಮ್ ಯುವಕರಿಗೆ ಕ್ರೂರವಾಗಿ ಥಳಿಸಿದ ಪೊಲೀಸರು

Prasthutha|

►ಗೋ ಹತ್ಯೆ ಮಾಡಿದ್ದೇವೆಂದು ಒಪ್ಪಿಕೊಳ್ಳುವಂತೆ ಬೆದರಿಕೆ

- Advertisement -

ಗೋ ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ಆರು ಮಂದಿ ಮುಸ್ಲಿಮ್ ಯುವಕರಿಗೆ ಉತ್ತರ ಪ್ರದೇಶದ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಅಲ್ಲಿನ ಅಮ್ರೋಹ ಎಂಬಲ್ಲ ನಡೆದಿದೆ.

ಪೊಲೀಸರು ಮದ್ಯ ಸೇವಿಸಿದ್ದರು, ಅವರು ಇಡೀ ರಾತ್ರಿ ನಮ್ಮನ್ನು ಹಿಂಸಿಸಿದರು. ಮುಂಜಾನೆ 5 ಗಂಟೆಗೆ ಪೊಲೀಸರು ನಮ್ಮನ್ನು ನಿರಪರಾಧಿಗಳು ಎಂದು ಬಿಡುಗಡೆ ಮಾಡಿ “ಯಾರಿಗೂ ಹೇಳಬೇಡಿ” ಎಂದು ಬೆದರಿಸಿ ಕಳುಹಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

- Advertisement -
https://twitter.com/imMAK02/status/1399249667297210368

ನಾವು ಗೋ ಹತ್ಯೆ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವಂತೆ ಪೊಲೀಸರು ನಮ್ಮ ಮೇಲೆ ಒತ್ತಡ ಹೇರಿ, ತೀವ್ರವಾಗಿ ಥಳಿಸಿದರು. ಗಡ್ಡ ಹಿಡಿದು ಎಳೆದಾಡಿದರು ಎಂದು ಸಂತ್ರಸ್ತರೊಬ್ಬರು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಮೊರಾದಾಬಾದ್ ಗೇಟ್ ಬಳಿಯ ನಿವಾಸಿಗಳಾದ ವಸೀಂ, ಅರ್ಷದ್, ಫೈಸಾನ್, ಅಬ್ದುಲ್ ಖಾದರ್ ಮತ್ತು ಗುಡ್ಡು ಹಾಗೂ ಮತ್ತೋರ್ವ ಯುವಕನನ್ನು ಕೊತ್ವಾಲಿ ಠಾಣೆ ಪೊಲೀಸರು ಕರೆದೊಯ್ದು ತೀವ್ರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

Join Whatsapp