Home ಟಾಪ್ ಸುದ್ದಿಗಳು ಮಂಗಳೂರು: ಹಿಂದೂ ಕಾರ್ಯಕ್ರಮಗಳ ರಕ್ಷಣೆಗೆ 50 ಮಂದಿ ತಲವಾರು ಹಿಡಿದು ಸಜ್ಜು: ಶ್ರೀರಾಮ ಸೇನಾ ಮುಖಂಡ

ಮಂಗಳೂರು: ಹಿಂದೂ ಕಾರ್ಯಕ್ರಮಗಳ ರಕ್ಷಣೆಗೆ 50 ಮಂದಿ ತಲವಾರು ಹಿಡಿದು ಸಜ್ಜು: ಶ್ರೀರಾಮ ಸೇನಾ ಮುಖಂಡ

ಮಂಗಳೂರು: ಹಿಂದೂ ಕಾರ್ಯಕ್ರಮಗಳ ರಕ್ಷಣೆಗೆ 50 ಮಂದಿ ಶ್ರೀರಾಮ‌ಸೇನೆ ಕಾರ್ಯಕರ್ತರು ತಲವಾರು ಸಮೇತ ತಯಾರಾಗಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲ್ಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದಿಂದ ಜಹಾದಿ ಶಕ್ತಿಗಳು ಹದ್ದು ಮೀರುತ್ತಿವೆ. ಮುಸಲ್ಮಾನ ಪುಂಡರು ನಾಗಮಂಗಲ, ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಆರೋಪ ಮಾಡಿದರು.

ರಾಜ್ಯ ಸರಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಂತಿದೆ. ಗೃಹ ಮಂತ್ರಿಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯೋ ಇಲ್ವೋ ಗೊತ್ತಿಲ್ಲ. ನಾಗಮಂಗಲ ಕೋಮುಗಲಭೆ ಘಟನೆ ಆಕಸ್ಮಿಕ ಅಂತಾರೆ. ಗೃಹ ಮಂತ್ರಿಗಳು ಅಯೋಗ್ಯರು. ವ್ಯವಸ್ಥಿತಿವಾಗಿ ನಡೆಸಲಾದ ಗಲಭೆ ಆಕಸ್ಮಿಕ ಅಂತ ತೋರುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version