Home ಟಾಪ್ ಸುದ್ದಿಗಳು ರೈಲು ಹರಿದು 46 ಕುರಿಗಳು ದಾರುಣ ಸಾವು

ರೈಲು ಹರಿದು 46 ಕುರಿಗಳು ದಾರುಣ ಸಾವು

ತುಮಕೂರು: ಹಳ್ಳವೊಂದರಲ್ಲಿ ನೀರು ಕುಡಿದು ವಾಪಸ್ ಆಗುತ್ತಿದ್ದ ಕುರಿಮಂದೆ ಮೇಲೆ ರೈಲು ಹರಿದು 46 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿಯಲ್ಲಿ ಎಂಬಲ್ಲಿ ನಡೆದಿದೆ. ಸತ್ತ ಕುರಿಗಳ ಮೌಲ್ಯ ಸುಮಾರು 15 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕುರಿಗಳು ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ರೈತ ದೇವರಾಜುಗೆ ಸೇರಿದ್ದಾಗಿದೆ. ದೇವರಾಜು ಅವರು ಸತ್ತ ಕುರಿಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾರೆ. ಈ ವೇಳೆ ಐದು ಕುರಿ ಉಚಿತವಾಗಿ ನೀಡುವಂತೆ ರೈಲ್ವೆ ಸಿಬ್ಬಂದಿಯೊಬ್ಬ ಧಮ್ಕಿ ಹಾಕಿದ್ದಾರೆ. ಸತ್ತ ಕುರಿಗಳಲ್ಲಿ ಪಾಲು ಕೇಳಿದ ರೈಲ್ವೆ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆ ಕುರಿತಂತೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version