ಕೊಲ್ಕತ್ತಾದಲ್ಲಿ ಬಿಜೆಪಿ ಸಂಸದನ ನಿವಾಸಕ್ಕೆ ಬಾಂಬ್ ದಾಳಿ: ಬಿಜೆಪಿ ಆರೋಪ

Prasthutha|

ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷವು ಕೋಲ್ಕತ್ತಾ ಬಳಿಯ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸದ ಮೇಲೆ ಇಂದು ಮುಂಜಾನೆ 3 ಬಾಂಬ್ ಗಳನ್ನು ಎಸೆದಿದೆ ಎಂದು ಬಿಜೆಪಿ ಮುಖಂಡ ದಿಲೀಪ್ ಘೋಷ್ ಆರೋಪಿಸಿದ್ದಾರೆ. ದಾಳಿಯಿಂದ ಸಂಸದರ ನಿವಾಸದ ಗೇಟ್ ಗೆ ಹಾನಿಯಾಗಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ಅವರು ತಿಳಿಸಿದರು.

- Advertisement -

ಕೋಲ್ಕತ್ತಾದಿಂದ 100 ಕಿ.ಮೀ ದೂರದಲ್ಲಿರುವ ಜಗತ್ತಾಲ್ ನಲ್ಲಿರುವ ಬಿಜೆಪಿ ಸಂಸದರ ಮನೆಯ ಮೇಲೆ ಬೈಕಿನಲ್ಲಿ ಆಗಮಿಸಿದ 3 ದುಷ್ಕರ್ಮಿಗಳ ಇಂದು ಮುಂಜಾನೆ ಸರಿಸುಮಾರು 6.30 ಕ್ಕೆ ಬಾಂಬ್ ಗಳನ್ನು ಎಸೆದು ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಬಿಜೆಪಿಯ ಈ ಆರೋಪವನ್ನು ನಿರಾಕರಿಸಿರುವ ಆಡಳಿತಾರೂಢ ಟಿ.ಎಮ್.ಸಿ ಬಂಗಾಳ ಬಿಜೆಪಿಯ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದೆ.

Join Whatsapp