Home ಟಾಪ್ ಸುದ್ದಿಗಳು ಚಿನ್ನದ ವ್ಯಾಪಾರಿಗಳ ಅಡ್ಡಗಟ್ಟಿ 20 ಲಕ್ಷ ನಗದು, ಕಾರು ಸುಲಿಗೆ

ಚಿನ್ನದ ವ್ಯಾಪಾರಿಗಳ ಅಡ್ಡಗಟ್ಟಿ 20 ಲಕ್ಷ ನಗದು, ಕಾರು ಸುಲಿಗೆ

ಮಂಡ್ಯ: ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ 20 ಲಕ್ಷ ನಗದು ಹಾಗೂ ಕಾರಿನ ಜೊತೆ ಪರಾರಿಯಾಗಿರುವ ದುರ್ಘಟನೆ ಹೊಸಬೂದನೂರು ಬಳಿ ನಡೆದಿದೆ.

ಹ್ಯೂಂಡಾಯ್ ಕ್ರೇಟಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೆಂಗಳೂರಿನಿಂದ ನಿಲೇಶ್ ಹಾಗೂ ಅವರ ಸ್ನೇಹಿತ ರುಷಿಕೇಶ್ 20 ಲಕ್ಷ ಹಣದ ಜೊತೆ ಕೇರಳಕ್ಕೆ ತೆರಳುತ್ತಿದ್ದಾಗ ಹೊಸಬೂದನೂರು ಬಳಿ ಅಡ್ಡಗಟ್ಟಿ ಕೃತ್ಯ ನಡೆಸಿದ್ದಾರೆ.

ಬೆಂಗಳೂರಿನ ರಾಜಾ ಮಾರ್ಕೆಟ್ ನ ತಿರುಮಲ ಜ್ಯುವೆಲರಿ ಶಾಪ್ನಲ್ಲಿ ಚಿನ್ನ  ಮಾರಾಟ ಮಾಡಿ 20 ಲಕ್ಷ ನಗದು ಜೊತೆ ತೆರಳುವ ಮಾರ್ಗ ಮಧ್ಯೆ ಈ ಕೃತ್ಯ ನಡೆದಿದೆ.

ಮಂಡ್ಯದ ಹೊಸಬೂದನೂರು ಬಳಿ ಬರುತ್ತಿದ್ದಂತೆ 6 ಮಂದಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ಸುತ್ತಿಗೆ ಹಾಗೂ ರಾಡ್ ನಿಂದ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಸ್ವಿಫ್ಟ್ ಕಾರಿನ ಸಮೇತ ಪರಾರಿಯಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಬಂಧನಕ್ಕಾಗಿ 6 ವಿಶೇಷ ತಂಡಗಳನ್ನು ರಚಿಸಲಾಗಿದೆ.

Join Whatsapp
Exit mobile version