ಚಿನ್ನದ ವ್ಯಾಪಾರಿಗಳ ಅಡ್ಡಗಟ್ಟಿ 20 ಲಕ್ಷ ನಗದು, ಕಾರು ಸುಲಿಗೆ

Prasthutha|

ಮಂಡ್ಯ: ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ 20 ಲಕ್ಷ ನಗದು ಹಾಗೂ ಕಾರಿನ ಜೊತೆ ಪರಾರಿಯಾಗಿರುವ ದುರ್ಘಟನೆ ಹೊಸಬೂದನೂರು ಬಳಿ ನಡೆದಿದೆ.

- Advertisement -

ಹ್ಯೂಂಡಾಯ್ ಕ್ರೇಟಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೆಂಗಳೂರಿನಿಂದ ನಿಲೇಶ್ ಹಾಗೂ ಅವರ ಸ್ನೇಹಿತ ರುಷಿಕೇಶ್ 20 ಲಕ್ಷ ಹಣದ ಜೊತೆ ಕೇರಳಕ್ಕೆ ತೆರಳುತ್ತಿದ್ದಾಗ ಹೊಸಬೂದನೂರು ಬಳಿ ಅಡ್ಡಗಟ್ಟಿ ಕೃತ್ಯ ನಡೆಸಿದ್ದಾರೆ.

ಬೆಂಗಳೂರಿನ ರಾಜಾ ಮಾರ್ಕೆಟ್ ನ ತಿರುಮಲ ಜ್ಯುವೆಲರಿ ಶಾಪ್ನಲ್ಲಿ ಚಿನ್ನ  ಮಾರಾಟ ಮಾಡಿ 20 ಲಕ್ಷ ನಗದು ಜೊತೆ ತೆರಳುವ ಮಾರ್ಗ ಮಧ್ಯೆ ಈ ಕೃತ್ಯ ನಡೆದಿದೆ.

- Advertisement -

ಮಂಡ್ಯದ ಹೊಸಬೂದನೂರು ಬಳಿ ಬರುತ್ತಿದ್ದಂತೆ 6 ಮಂದಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ಸುತ್ತಿಗೆ ಹಾಗೂ ರಾಡ್ ನಿಂದ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಸ್ವಿಫ್ಟ್ ಕಾರಿನ ಸಮೇತ ಪರಾರಿಯಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಬಂಧನಕ್ಕಾಗಿ 6 ವಿಶೇಷ ತಂಡಗಳನ್ನು ರಚಿಸಲಾಗಿದೆ.

Join Whatsapp