ರಸ್ತೆ ಇಲ್ಲವೆಂದು ಅರ್ಧ ದಾರಿಯಲ್ಲೇ ನಿಂತ ಆಂಬ್ಯುಲೆನ್ಸ್; ಮಗು ಮೃತ್ಯು

Prasthutha|

ಚೆನ್ನೈ: ಹಾವು ಕಚ್ಚಿದ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ವೆಲ್ಲೋರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಮೃತ ಮಗುವಿಗೆ 18 ತಿಂಗಳಾಗಿತ್ತು. ಮಗುವಿಗೆ ಹಾವು ಕಚ್ಚಿದ ಕೂಡಲೇ ಆಸ್ಪತ್ರೆ ಕರೆದುಕೊಂಡು ಹೋಗಲು ಆ್ಯಂಬಲೆನ್ಸ್‌ನಲ್ಲಿ ಬಂದಿದ್ದಾರೆ. ಆದರೆ, ಗುಡ್ಡಗಾಡು ಪ್ರದೇಶದಲ್ಲಿ ಸರಿಯಾದ ರಸ್ತೆ ಇಲ್ಲದ್ದರಿಂದ ಆ್ಯಂಬುಲೆನ್ಸ್ ಮುಂದೆ ಹೋಗಲು ಸಾಧ್ಯವಾಗಿಲ್ಲ. ಆಗ, ತಾಯಿಯು ಮಗುವನ್ನು ಹೊತ್ತುಕೊಂಡು 6 ಕಿ.ಮೀ ನಡೆದು ಬರುವಷ್ಟರಲ್ಲಿ ಮಗುವ ಮೃತಪಟ್ಟಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ರಸ್ತೆ ಸರಿ ಇಲ್ಲದ ಕಾರಣ ಆ್ಯಂಬುಲೆನ್ಸ್ ಅವರನ್ನು ಮಧ್ಯದಲ್ಲಿ ಬಿಡಬೇಕಾಗಿ ಬಂದ ಕಾರಣ ತಾಯಿ ಮಗುವನ್ನು 6 ಕಿಲೋಮೀಟರ್ ಬೆಟ್ಟವನ್ನು ಹತ್ತಬೇಕಾಯಿತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಮಗು ಸಾವನ್ನಪ್ಪಿದೆ. ಈ ಭಾಗದಲ್ಲಿ ಸರಿಯಾದ ರಸ್ತೆಗಳು ಇಲ್ಲದಿರುವುದೇ ಮಗು ಸಾಯಲು ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

Join Whatsapp