10 ರೂ. ಆಸೆ ತೋರಿಸಿ 1.66 ಲಕ್ಷ ದೋಚಿದ ಖದೀಮರು

Prasthutha|

ಬೆಂಗಳೂರು: ಚಿನ್ನ ಅಡವಿಟ್ಟು ಹಣ ತೆಗೆದುಕೊಂಡು ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿದ ತಂಡವೊಂದು, ಆತನ ಗಮನ ಬೇರಡೆ ಸೆಳೆದು ಹಣದ ಬ್ಯಾಗ್ ದೋಚಿರುವ ಘಟನೆ ಅಮೃತಹಳ್ಳಿಯ ಕಾಫಿ ಬೊರ್ಡ್ ರಸ್ತೆಯಲ್ಲಿ ನಡೆದಿದೆ.

- Advertisement -

ಆರ್ಥಿಕ ಸಮಸ್ಯೆಯಲ್ಲಿದ್ದ ವ್ಯಕ್ತಿಯೊಬ್ಬರು ಕಳೆದ ಡಿ. 21ರಂದು ಬ್ಯಾಂಕ್ ನಲ್ಲಿ ಮಗಳ ಚಿನ್ನಾಭರಣ ಅಡವಿಟ್ಟು ಹಣ ತೆಗೆದುಕೊಂಡು ಬೈಕ್ ನಲ್ಲಿ ಹೋಗುತ್ತಿದ್ದರು.

ಮಾರ್ಗ ಮಧ್ಯೆ ಟೀ ಕುಡಿಯಲೆಂದು ರಸ್ತೆಬದಿ ಬೈಕ್ ನಿಲ್ಲಿಸಿದ್ದು ಅವರನ್ನು ಬ್ಯಾಂಕ್ ನಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಖದೀಮರು, ರಸ್ತೆಯಲ್ಲಿ 10, 20, 50 ರೂಪಾಯಿಯ ನೋಟುಗಳನ್ನು ಎಸೆದಿದ್ದಾರೆ. ಬಳಿಕ ರಸ್ತೆಯಲ್ಲಿ ನಿಮ್ಮ ಹಣ ಬಿದ್ದಿದೆ ತೆಗೆದುಕೊಳ್ಳಿ ಎಂದು ವ್ಯಕ್ತಿಯ ಗಮನ ಆ ಕಡೆ ಸೆಳೆದಿದ್ದಾರೆ.

- Advertisement -

ಅತ್ತ ವ್ಯಕ್ತಿ ನೋಟುಗಳನ್ನು ತೆಗೆದುಕೊಳ್ಳಲು ತೆರಳುತ್ತಿದ್ದಂತೆ, ಇತ್ತ ಬೈಕ್ ನಲ್ಲಿದ್ದ 1 ಲಕ್ಷ 66 ಸಾವಿರ ರೂ.ಬ್ಯಾಗನ್ನು ಎಗರಿಸಿಕೊಂಡು   ಪರಾರಿಯಾಗಿದ್ದಾರೆ.

ಈ ಸಂಬಂಧ ಹಣ ಕಳೆದುಕೊಂಡ ವ್ಯಕ್ತಿಯು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.

Join Whatsapp