ಅಯೋಧ್ಯೆಯಲ್ಲಿ ರಾಮ ಭಕ್ತರಿಗೆ ಯಾತ್ರಿ ನಿವಾಸ- ಕರ್ನಾಟಕ ಬಜೆಟಿನಿಂದ 10 ಕೋಟಿ ಅನುದಾನ

Prasthutha|

- Advertisement -

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ವಿವಾದಿತ ರಾಮಮಂದಿರಕ್ಕೆ ಭೇಟಿ ನೀಡುವ ಕರ್ನಾಟಕದ ಪ್ರವಾಸಿಗರಿಗೆ ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಿಸಲು ರಾಜ್ಯ ಸರ್ಕಾರ 2021 ರಾಜ್ಯ ಬಜೆಟಿನಲ್ಲಿ 10 ಕೋಟಿ ಅನುದಾನ ಘೋಷಿಸಿದೆ.

ಅಯೋಧ್ಯೆಯಲ್ಲಿ ಕರ್ನಾಟಕದ ರಾಮ ಭಕ್ತರಿಗಾಗಿ ಯಾತ್ರಿ ನಿವಾಸ ನಿರ್ಮಿಸಲು ಕರ್ನಾಟಕ ಸರ್ಕಾರ ಯೋಚಿಸಿದ್ದು ಬಜೆಟಿನಲ್ಲಿ 10 ಕೋಟಿ ರೂ ಅದಕ್ಕಾಗಿ ಮೀಸಲಿಟ್ಟಿದೆ. ಅಲ್ಲದೇ ಉತ್ತರ ಪ್ರದೇಶದ ಸರ್ಕಾರ ಯಾತ್ರಿ ನಿವಾಸ ನಿರ್ಮಿಸಲು 5ಎಕರೆ ಭೂಮಿ ಒದಗಿಸುತ್ತದೆ ಎಂದೂ ಸದನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

Join Whatsapp