ವಿರಾಜಪೇಟೆ : ಕೋವಿಡ್ ನಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ 1ಲಕ್ಷ ರೂ. ಧನಾದೇಶ ವಿತರಣೆ
Prasthutha: January 18, 2022

ವಿರಾಜಪೇಟೆ: ಕೊರೋನಾ ಸೊಂಕಿನಿಂದ ಮೃತಪಟ್ಟ ವಿರಾಜಪೇಟೆ ತಾಲ್ಲೂಕಿನ ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಮಂಜೂರಾದ 1ಲಕ್ಷ ರೂ. ಗಳ ಧನಾದೇಶವನ್ನು ವಿರಾಜಪೇಟೆಯ ಕಚೇರಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.
ಈ ಸಂದರ್ಭ ತಾಲೂಕು ತಹಸೀಲ್ದಾರ್ ಆರ್.ಯೋಗಾನಂದ, ಕಂದಾಯ ಅಧಿಕಾರಿ ಮಂಡೇಪಂಡ ಹರೀಶ್ ಇದ್ದರು.
