‘ಸೋತರೆ ಮಾಡುವ ಕೆಲಸಗಳು’ ಕರಪತ್ರದಿಂದ ಗಮನ ಸೆಳೆದಿದ್ದ ಮಹಿಳೆಗೆ ಭಾರೀ ಮುಖಭಂಗ

Prasthutha|

ತುಮಕೂರು: ಚುನಾವಣೆಯಲ್ಲಿ ಸೋತರೆ ಸಮಾಜ ಸೇವೆಗಾಗಿ ಏನೆಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದು ಕರಪತ್ರದಲ್ಲಿ ಮುದ್ರಿಸಿ ಸುದ್ದಿಯಾಗಿದ್ದ ಹೆಬ್ಬೂರು ಗ್ರಾಮ ಪಂಚಾಯತ್ ನ ಕಲ್ಕರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಂಗಮ್ಮ ಕೇವಲ 2 ಮತಗಳನ್ನು ಗಳಿಸಿ ಹೀನಾಯವಾಗಿ ಸೋತಿದ್ದಾರೆ.

- Advertisement -

ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿ.ಎಂ.ತಿಮ್ಮೇಗೌಡ ಅವರು 453 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.

ಗಂಗಮ್ಮ ಅವರ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೊಳಗಾಗಿದ್ದು, ಇದು ಮತದಾರರನ್ನು ಬೆದರಿಸುವ ಒಂದು ತಂತ್ರ ಎಂದು ಆರೋಪಿಸಿದ ಕೋಲಾರದ ವಕೀಲರೊಬ್ಬರು ಕರಪತ್ರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದಲ್ಲದೇ ಇವರು ಸೋಲುವುದೇ ಒಳ್ಳೆಯದು ಎಂದು ಹಲವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

- Advertisement -

ತಾನು ಗೆದ್ದರೆ ಊರಿಗೆ ಚರಂಡಿ, ದೇವಾಲಯಗಳಿಗೆ ಹೋಗಲು ರಸ್ತೆ ಸೇರಿದಂತೆ ಸೋತರೆ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಮನಸ್ವಿನಿ ಯೋಜನೆ ಲಾಭ ಪಡೆಯುತ್ತಿರುವ ಕುಟುಂಬಗಳ ಅರ್ಜಿ ವಜಾ, ಅನರ್ಹ ಪಡಿತರದಾರರ ವಜಾ, ಸರಕಾರಿ ಜಾಗ ಒತ್ತುವರಿ ತೆರವು ಸೇರಿದಂತೆ ಹಲವು ಭರವಸೆಗಳನ್ನು ಗಂಗಮ್ಮ ಅವರ ಕರಪತ್ರದಲ್ಲಿ ಮುದ್ರಿಸಲಾಗಿತ್ತು.

Join Whatsapp