ವಿದೇಶದಿಂದ ಬಂದ ಯುವಕನನ್ನು ಅಪಹರಿಸಿ ಕೊಲೆಗೈದು ಆರೋಪಿಗಳು ಪರಾರಿ

Prasthutha|

ಕಾಸರಗೋಡು: ಭಾನುವಾರ ಮಧ್ಯಾಹ್ನ ಗಲ್ಫ್‌’ನಿಂದ ಹಿಂದಿರುಗಿದ್ದ ಯುವಕನೋರ್ವನನ್ನು, ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಆಸ್ಪತ್ರೆಯಲ್ಲಿರಿಸಿ ಪರಾರಿಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

- Advertisement -


ದುಷ್ಕರ್ಮಿಗಳಿಂದ ಹತ್ಯೆಯಾದ ಯುವಕನನ್ನು ಅಬೂಬಕರ್ ಸಿದ್ದಿಕ್ [ 32] ಎಂದು ಗುರುತಿಸಲಾಗಿದೆ.
ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಮೃತ ಸಿದ್ದೀಕ್ ನ ಅಣ್ಣ ಅನ್ವರ್ ಮತ್ತು
ಸಂಬಂಧಿ ಅನ್ಸಾರ್ ಎಂಬ ಇಬ್ಬರು ಯುವಕರನ್ನು ಎರಡು ದಿನಗಳ ಹಿಂದೆ ಪೈವಳಿಕೆಯಲ್ಲಿರುವ ತಂಡವೊಂದು, ಅಪಹರಿಸಿತ್ತು. ಇವರನ್ನು ಬಿಡುಗಡೆ ಮಾಡಬೇಕಾದರೆ, ಗಲ್ಫ್‌’ನಲ್ಲಿದ್ದ ಸಿದ್ದೀಕ್ ರನ್ನು ಊರಿಗೆ ಕರೆಸಬೇಕು ಎಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಸಿದ್ದೀಕ್ ಭಾನುವಾರ ಊರಿಗೆ ಬಂದಿದ್ದರು. ಊರಿಗೆ ಬಂದ ಕೆಲ ಗಂಟೆಗಳಲ್ಲೇ ಸಿದ್ದೀಕ್ ಮನೆಯಿಂದಲೇ ಅಪಹರಣಕ್ಕೊಳಗಾಗಿದ್ದರು. ಬಳಿಕ ಸಂಜೆಯ ವೇಳೆಗೆ ಬಂದ್ಯೋಡು ಎಂಬಲ್ಲಿರುವ ಡಿಎಂ ಆಸ್ಪತ್ರೆಗೆ ಸಿದ್ದೀಕ್’ರನ್ನು ಕರೆತಂದ ಅಪಹರಣಕಾರರು, ಆತ ಮೃತಪಟ್ಟಿದ್ದಾನೆ ಎಂದು ತಿಳಿಯುತ್ತಲೇ ಸ್ಥಳದಿಂದ ಪರಾರಿಯಾಗಿದ್ದಾರೆ.

- Advertisement -

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗಿದೆ.
ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಅನ್ವರ್ ಮತ್ತು ಅನ್ಸಾರ್
ಸ್ಥಿತಿಯೂ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲಿಸ್ ಮೂಲಗಳು ತಿಳಿಸಿವೆ.

Join Whatsapp