ಪ್ರತಿಪಕ್ಷಗಳು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಪುನಃಸ್ಥಾಪನೆಯಾಗಬೇಕೆಂದು ಬಯಸುತ್ತಿದೆ”: ಮೋದಿ

Prasthutha|


ಪಾಟ್ನಾ: ಪ್ರತಿಪಕ್ಷಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳನ್ನು ಮತ್ತೆ ನೀಡಬೇಕೆಂದು ಬಯಸುತ್ತಿವೆ ಎಂದು ಬಿಹಾರ ಚುನಾವಣಾ ಪ್ರಚಾರದಲ್ಲಿ ಮೋದಿ ಹೇಳಿದ್ದಾರೆ. ಎಲ್ಲರೂ 370ನೇ ವಿಧಿಯನ್ನು ರದ್ದುಗೊಳಿಸಲು ಕಾಯುತ್ತಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬಂದರೆ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು.

- Advertisement -


ಇಂತಹಾ ಹೇಳಿಕೆಗಳನ್ನು ನೀಡಿ ಬಿಹಾರದಲ್ಲಿ ಅವರಿಗೆ ಮತಗಳನ್ನು ಕೇಳಲು ಧೈರ್ಯ ಇದೆಯೇ? ಇದು ಬಿಹಾರಿಗಳಿಗೆ ಅವಮಾನವಲ್ಲವೇ? ದೇಶವನ್ನು ರಕ್ಷಿಸಲು ಮಕ್ಕಳನ್ನು ಗಡಿ ಪ್ರದೇಶಕ್ಕೆ ಕಳುಹಿಸುವ ರಾಜ್ಯಕ್ಕೆ ಮಾಡಿದ ಅವಮಾನವಲ್ಲವೇ? ಎಂದು ಮೋದಿ ಹೇಳಿದರು.
ಈ ಹಿಂದೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ರಾಮ ಮಂದಿರ ದರ್ಶನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ನಾವು ಪಾಕಿಸ್ಥಾನಕ್ಕೆ ಪ್ರವೇಶಿಸಿ ಭಯೋತ್ಪಾದಕರನ್ನು ಕೊಂದಿದ್ದೇವೆ ಎಂದು ಯೋಗಿ ಈ ಹಿಂದೆ ಬಿಹಾರ ಚುನಾವಣಾ ಪ್ರಚಾರದಲ್ಲಿ ತಿಳಿಸಿದ್ದರು.

Join Whatsapp