ನಟಿ ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ಮನೆ ಮೇಲೆ ಐಟಿ ದಾಳಿ ! ಕೇಂದ್ರದಿಂದ ಸ್ವತಂತ್ರ ಸಂಸ್ಥೆಗಳ ದುರ್ಬಳಕೆಗೆ ಮತ್ತೊಂದು ಸಾಕ್ಷ್ಯ ?

Prasthutha|

- Advertisement -

ನವದೆಹಲಿ: ತೆರಿಗೆ ವಂಚನೆ ಆರೋಪದ ಹಿನ್ನಲೆಯಲ್ಲಿ ಮುಂಬೈ ನಟಿ ತಾಪ್ಸಿ ಪನ್ನು ಮತ್ತು ಚಲನಚಿತ್ರ ನಿರ್ಮಾಪಕ ನಟ ಅನುರಾಗ್ ಕಶ್ಯಪ್ ರವರಿಗೆ ಸಂಬಂಧಿಸಿದ ಮನೆ ಹಾಗೂ ಆಸ್ತಿಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರಿಸುಮಾರು 20 ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಈ ಹಿಂದೆ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಸರ್ಕಾರದ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದರು. ಕೇಂದ್ರ ಸರಕಾರದ  ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇವರಿಬ್ಬರು ಧ್ವನಿ ಎತ್ತಿರುವುದನ್ನು ಇಲ್ಲಿ ಗಮನಾರ್ಹ.

- Advertisement -

ಇತ್ತೀಚೆಗೆ ಪಾಪ್ ತಾರೆ ರಿಹಾನ್ನಾ ಅವರು ರೈತರ ಆಂದೋಲನಕ್ಕೆ ಬೆಂಬಲವಾಗಿ ಟ್ವಿಟ್ಟರ್ ಪೋಸ್ಟ್ ಹಾಕಿದ್ದರು. ಇದರ ವಿರುದ್ಧವಾಗಿ ಬಿಜೆಪಿ ಸರ್ಕಾರ  ಕೆಲ ಸ್ಟಾರ್ ನಟರು, ಕ್ರಿಕೆಟಿಗರನ್ನು ಬಿಟ್ಟು ಅವರಿಂದ ಸರ್ಕಾರವನ್ನು ಬೆಂಬಲ್ಸಿವ ರೂಪದಲ್ಲಿನ ಹೇಳಿಕೆಗಳನ್ನು ಕೊಡಿಸಲಾಗಿತ್ತು. ಇದನ್ನು ಕೂಡಾ ತಾಪ್ಸಿ ಪನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು.

ಅನುರಾಗ್ ಕಶ್ಯಪ್ ಅವರು 2019 ರಲ್ಲಿ ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನಾಕಾರರ ವಿರುದ್ಧದ ಹಿಂಸಾಚಾರವನ್ನು ಖಂಡಿಸುವ ಬಗ್ಗೆ ಧ್ವನಿ ಎತ್ತಿದ್ದರು ಮತ್ತು ಉತ್ತರ ಪ್ರದೇಶದ ಸರಕಾರದ ನಡೆಯನ್ನು ಕಟುವಾಗಿ ವಿರೋಧಿಸಿದ್ದರು. ಈ ಹಿನ್ನಲೆಯಲ್ಲಿ  ಐಟಿ ಶೋಧ ಕಾರ್ಯಾಚರಣೆ ಕೇವಲ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ಮೇಲೆ ಬಳಸಲಾಗುತ್ತದೆಯೇ ಎಂಬ ಸಂಶಯ ಸಾಮಾಜಿಕ ವಲಯಗಳಲ್ಲಿ ಪ್ರಶ್ನೆಯಾಗಿದ್ದು, ಸರ್ಕಾರದ ನಡೆಯ ಬಗ್ಗೆ ಸಂಶಯ ಮೂಡಿಸುವಂತಾಗಿದೆ.

Join Whatsapp