Home ಟಾಪ್ ಸುದ್ದಿಗಳು ಧ್ವಜ ವಿವಾದ | ಮೆಹಬೂಬಾ ಮುಫ್ತಿ ವಿರುದ್ಧ ‘ದೇಶದ್ರೋಹ’ದ ಆರೋಪ | ಬಂಧನಕ್ಕೆ ಒತ್ತಾಯ

ಧ್ವಜ ವಿವಾದ | ಮೆಹಬೂಬಾ ಮುಫ್ತಿ ವಿರುದ್ಧ ‘ದೇಶದ್ರೋಹ’ದ ಆರೋಪ | ಬಂಧನಕ್ಕೆ ಒತ್ತಾಯ

ಶ್ರೀನಗರ : ಗೃಹ ಬಂಧನದಿಂದ ಬಿಡುಗಡೆಯಾದ ಬಳಿಕ ತಮ್ಮ ಮೊದಲ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದಾರೆ, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಮತ್ತು ಬಂಧಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರದ ಧ್ವಜ ಹಿಡಿದು, “ಇದು ನನ್ನ ಧ್ವಜ’’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ರಾಜ್ಯದ ಧ್ವಜವನ್ನು ಮರಳಿ ಹಾರಿಸಲು ತಾವು ಹೋರಾಟ ಮಾಡುವುದಾಗಿ ಮೆಹಬೂಬಾ ಹೇಳಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಮರಳಿ ಪಡೆಯಲು ಪ್ರಯತ್ನಿಸುವುದಾಗಿ ಘೋಷಿಸಿದ್ದಾರೆ.

“ಇದು ನನ್ನ ಧ್ವಜ, ಈ ಧ್ವಜ ಮರಳಿ ಬಂದಾಗ, ನಾವು ಆ ಧ್ವಜ (ಭಾರತೀಯ ತ್ರಿವರ್ಣ ಧ್ವಜ)ವನ್ನೂ ಹಾರಿಸುತ್ತೇವೆ’’ ಎಂದು ಮೆಹಬೂಬಾ ಹೇಳಿದ್ದಾರೆ. “ನಮ್ಮ ಧ್ವಜ ಮರಳಿ ದೊರೆಯುವವರೆಗೆ, ನಾವು ಬೇರೆ ಯಾವುದೇ ಧ್ವಜ ಹಾರಿಸುವುದಿಲ್ಲ. ಆ ಧ್ವಜದೊಂದಿಗೆ ಈ ಧ್ವಜದ ಜೊತೆ ನಮ್ಮ ಸಂಬಂಧ ಬೆಸೆದಿದೆ’’ ಎಂದು ಅವರು ಹೇಳಿದ್ದಾರೆ.

ಇದನ್ನು ಖಂಡಿಸಿರುವ ಬಿಜೆಪಿ ಜಮ್ಮು-ಕಾಶ್ಮೀರ ಅಧ್ಯಕ್ಷ ರವೀಂದರ್ ರೈನಾ, ಕಾಶ್ಮೀರದ ಜನತೆಯನ್ನು ಮೆಹಬೂಬಾ ಪ್ರಚೋದಿಸುತ್ತಿದ್ದಾರೆ. ಏನಾದರೂ ಸಮಸ್ಯೆಗಳಾದಲ್ಲಿ ಪರಿಣಾಮ ಎದುರಿಸಲು ಆಕೆ ಸಿದ್ಧರಿರಬೇಕು ಎಂದು ಹೇಳಿದ್ದಾರೆ. ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಆಕೆಯನ್ನು ಜೈಲಿಗೆ ಕಳುಹಿಸುವಂತೆ ಅವರು ಒತ್ತಾಯಿಸಿದ್ದಾರೆ.

Join Whatsapp
Exit mobile version