Home ಟಾಪ್ ಸುದ್ದಿಗಳು ಡಿ.8ಕ್ಕೆ ಭಾರತ್ ಬಂದ್: ಟಿ.ಆರ್.ಎಸ್ ಬೆಂಬಲ

ಡಿ.8ಕ್ಕೆ ಭಾರತ್ ಬಂದ್: ಟಿ.ಆರ್.ಎಸ್ ಬೆಂಬಲ

ಹೈದರಾಬಾದ್: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಡಿಸೆಂಬರ್ 8ಕ್ಕೆ ಕರೆ ನೀಡಿರುವ ಭಾರತ್ ಬಂದ್ ಗೆ ತೆಲಂಗಾಣ ಮುಖ್ಯಮಂತ್ರಿ ಟಿ.ಆರ್.ಎಸ್. ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ರೈತರು ಡಿಸೆಂಬರ್ 8ಕ್ಕೆ ಕರೆ ನೀಡಿರುವ ಬಂದ್ ತೆಲಂಗಾಣದಲ್ಲಿ ಯಶಸ್ಸುಗೊಳಿಸಬೇಕೆಂದು ಅವರು ಇಂದು ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮನವಿ ಮಾಡಿದ್ದಾರೆ.

ಪ್ರಸ್ತಾಪಿತ ಬಂದ್ ನಲ್ಲಿ ಟಿ.ಆರ್.ಎಸ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version