ಡಿ.3ರಂದು ಕಲ್ಲಾಪುವಿನಲ್ಲಿ “ಕರ್ನಾಟಕವನ್ನು ಫ್ಯಾಶಿಸ್ಟರಿಂದ ರಕ್ಷಿಸಿ” ಅಭಿಯಾನದ ಸಮಾರೋಪ

Prasthutha|

ಮಂಗಳೂರು: ಫ್ಯಾಶಿಸ್ಟ್ ಶಕ್ತಿಗಳ ಅಟ್ಟಹಾಸವನ್ನು ವಿರೋಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಹಮ್ಮಿಕೊಂಡಿರುವ “ಕರ್ನಾಟಕವನ್ನು ಫ್ಯಾಶಿಸ್ಟರಿಂದ ರಕ್ಷಿಸಿ” ಅಭಿಯಾನದ ಸಮಾರೋಪ ಸಮಾರಂಭ ಮಂಗಳೂರಿನ ಹೊರವಲಯದ ಕಲ್ಲಾಪುವಿನ ಯೂನಿಟಿ ಹಾಲ್ ನ ಮೈದಾನದಲ್ಲಿ ಡಿಸೆಂಬರ್ 3 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮೊಯಿದಿನ್ ಹಳೆಯಂಗಡಿ ತಿಳಿಸಿದ್ದಾರೆ.

- Advertisement -

ಅಭಿಯಾನ ಅಂಗವಾಗಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಕಾರ್ನರ್ ಮೀಟ್, ಸಮುದಾಯದ ನಾಯಕರು, ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಿ ಜಾಗೃತಿಯನ್ನು ಮೂಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ಫ್ಯಾಶಿಸ್ಟ್ ಶಕ್ತಿಗಳ ಅಟ್ಟಹಾಸ ಮಿತಿಮೀರುತ್ತಿದ್ದು, ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಅಮಾಯಕ ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆಯಂತಹ ಘಟನೆಗಳು ವ್ಯಾಪಕ ಮತ್ತು ನಿರಂತರವಾಗಿ ನಡೆಯುತ್ತಿವೆ. ತ್ರಿಶೂಲ ದೀಕ್ಷೆ ಎಂಬ ನೆಪದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಕಾಯುಧಗಳನ್ನು ವಿತರಿಸಿ ಮುಸ್ಲಿಮ್ ಯುವಕರಿಗೆ, ವಿದ್ಯಾರ್ಥಿಗಳಿಗೆ ಮಾರಣಾಂತಿಕವಾಗಿ ಥಳಿಸಿ ಕೊಲೆಗೆ ಯತ್ನಿಸಲಾಗುತ್ತಿದೆ. ಪ್ರಚೋದನಾಕಾರಿ ಭಾಷಣಗಳಿಂದ ಪ್ರೇರಿತವಾದ ಸಂಘಪರಿವಾರದ ಕಾರ್ಯಕರ್ತರು ಅಮಾಯಕರ ಮೇಲೆ ತ್ರಿಶೂಲ ಮತ್ತು ಮಾರಕಾಯುಧಗಳ ಮೂಲಕ ಇರಿದು ದುಷ್ಕೃತ್ಯ ನಡೆಸುವುದರಿಂದ ಸಮಾಜದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಮಾತ್ರವಲ್ಲ ಸಂಘಪರಿವಾರ ಬೃಹತ್ ಮಟ್ಟದ ಗಲಭೆಗೆ ಯೋಜನೆ ರೂಪಿಸುತ್ತಿದೆ.

- Advertisement -

ಈ ನಿಟ್ಟಿನಲ್ಲಿ ಸಂಘಪರಿವಾರದ ಈ ದುಷ್ಕೃತ್ಯಗಳನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp