ಡಾ.‌ಸುಮತಿ ಹೆಗ್ಡೆಯವರ ನೇತೃತ್ವದಲ್ಲಿ ಮಂಗಳಮುಖಿಯರು ಜೆಡಿಎಸ್ ಸೇರ್ಪಡೆ

Prasthutha|

ಮಂಗಳೂರು: ಇಲ್ಲಿನ ಮಲ್ಲಿಕಟ್ಟೆಯ ಸುಮಾ ಸದನ ಸಭಾಂಗಣದಲ್ಲಿ ಮಂಗಳೂರಿನ ಹಲವು ಮಂಗಳಮುಖಿಯರು ಜೆಡಿಎಸ್ ನಾಯಕಿ ಡಾ.‌ಸುಮತಿ ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಜೆಡಿಎಸ್ ಪಕ್ಷದ ನಾಯಕಿಯರಾದ ನಿಷಾ, ಭಾರತೀ ಪುಷ್ಪರಾಜನ್, ಮಂಗಳೂರು ದಕ್ಷಿಣ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ವಿಣಾ ಶೆಟ್ಟಿ ಕವಿತಾ, ಆಶಾ ಸುಜ್ನೇಷ್, ಶಾರದಾ ಶೆಟ್ಟೆ, ಸುನೀತಾ, ಬಸೀರಾ, ಜೆಡಿಎಸ್ ಮಂಗಳೂರು ದಕ್ಷಿಣ ಪದಾಧಿಕಾರಿಗಳಾದ ಅಲ್ತಾಫ್ ತುಂಬೆ , ಸಲೀಂ ಜಾವೇದ್ , ದಿನೇಶ್ ಪಯಿಸ್, ಜಯರಾಂ, ಮನೋಜ್ ಕುಮಾರ್ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -


‌ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಬಂದ ಕಾರ್ಯಕರ್ತೆಯರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ.‌ಸುಮತಿ ಎಸ್ ಹೆಗ್ಡೆ ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಿಯಾ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ವಿನ್ಸೆಂಟ್ ಪೆರೇರಾ ಧನ್ಯವಾದಗೈದರು.

Join Whatsapp