ಟ್ರಾಕ್ಟರ್ ಪರೇಡ್ | ಪೊಲೀಸರು-ರೈತರ ನಡುವಿನ 2ನೇ ಸುತ್ತಿನ ಮಾತುಕತೆಯೂ ವಿಫಲ

Prasthutha|

ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರಂದು ನಡೆಸಲುದ್ದೇಶಿಸಿರುವ ‘ಟ್ರಾಕ್ಟರ್ ಪರೇಡ್’ ಕುರಿತ 2ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಪೊಲೀಸರು ಮತ್ತು ರೈತರ ನಡುವೆ ‘ಟ್ರಾಕ್ಟರ್ ಪರೇಡ್’ ಕುರಿತ ಮಾತುಕತೆ ನಡೆದಿತ್ತು.

- Advertisement -

ದೆಹಲಿಯ ಔಟರ್ ರಿಂಗ್ ರಸ್ತೆಯಲ್ಲಿ ರ್ಯಾಲಿಯನ್ನು ನಡೆಸುವ ಬೇಡಿಕೆಗೆ ರೈತರು ಅಂಟಿಕೊಂಡಿರುವುದರಿಂದ, ಇಂದು ನಡೆದ ಪೊಲೀಸರು ಮತ್ತು ರೈತರ ನಡುವಿನ 2ನೇ ಸುತ್ತಿನ ಮಾತುಕತೆ ವಿಫಲವಾಗಿದೆ.

ಈ ಕುರಿತಂತೆ ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.

- Advertisement -

“ರೈತರು ಟ್ರಾಕ್ಟರ್ ಪರೇಡ್ ಅನ್ನು ದೆಹಲಿಯಿಂದ ಹೊರಗೆ ನಡೆಸಬೇಕು ಎಂದು ಪೊಲೀಸರು ಬಯಸಿದ್ದಾರೆ. ಆದರೆ, ಅದು ಸಾಧ್ಯವಿಲ್ಲ, ನಾವು ದೆಹಲಿಯೊಳಗೆ ನಮ್ಮ ಮೆರವಣಿಗೆಯನ್ನು ಶಾಂತಿಯುತವಾಗಿ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.

Join Whatsapp