ಕೋವಿಡ್ 2ನೇ ಅಲೆಗೆ ತತ್ತರಿಸಿರುವ ನಡುವೆಯೇ 3ನೇ ಅಲೆಗೂ ಸಿದ್ಧರಾಗಿ : ಡಾ. ದೇವಿ ಪ್ರಸಾದ್ ಶೆಟ್ಟಿ

Prasthutha|

ಬೆಂಗಳೂರು: ಕೋವಿಡ್ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿರುವಾಗ ಸಾಂಕ್ರಾಮಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂಬ ಮುನ್ಸೂಚನೆ ನೀಡಿದ ಖ್ಯಾತ ಶಸ್ತ್ರಚಿಕಿತ್ಸಕ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಮುಂದಿನ ಕೆಲವು ವಾರಗಳಲ್ಲಿ ಭಾರತಕ್ಕೆ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 2 ಲಕ್ಷ ದಾದಿಯರು ಮತ್ತು 1.5 ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ.

- Advertisement -

ಭೀಕರ ಪರಿಸ್ಥಿತಿಯನ್ನು ಎದುರಿಸಲು ಆಮೂಲಾಗ್ರ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ. ಪ್ರಸ್ತುತ, ಭಾರತವು ಕೇವಲ 75,000 ರಿಂದ 90,000 ಐಸಿಯು ಹಾಸಿಗೆಗಳು ಮಾತ್ರ ಇವೆ. ಅದಾಗಲೇ ಬಹುತೇಕ ಎಲ್ಲಾ ಬೆಡ್ ಗಳು ಫುಲ್ ಆಗಿವೆ. ಇನ್ನು ಎರಡನೇ ಅಲೆ ಮಧ್ಯದ ಸ್ಥಿತಿಯಲ್ಲಿದ್ದು ಅದು ಉತ್ತುಂಗಕ್ಕೇರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದರು.

ಪ್ರಸ್ತುತ ಭಾರತದಲ್ಲಿ ದಿನಕ್ಕೆ ಸುಮಾರು 3.5 ಲಕ್ಷ ಪ್ರಕರಣಗಳನ್ನು ವರದಿಯಾಗುತ್ತಿವೆ. ಕೆಲವು ತಜ್ಞರು ಹೇಳುವಂತೆ ಈ ಸಂಖ್ಯೆ ಪ್ರತಿದಿನ ಗರಿಷ್ಠ 5 ಲಕ್ಷಕ್ಕೆ ಏರಬಹುದು. ಇನ್ನು ಮಾಧ್ಯಮಗಳಲ್ಲಿ ಐಸಿಯುಗಳಲ್ಲಿನ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಸಾಯುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ರೋಗಿಗಳನ್ನು ನೋಡಿಕೊಳ್ಳಲು ದಾದಿಯರು ಮತ್ತು ವೈದ್ಯರು ನಿರ್ದಿಷ್ಠ ಸಂಖ್ಯೆಯಲ್ಲಿಲ್ಲ ಎಂದರು.

- Advertisement -

ನಾರಾಯಣ ಹೆಲ್ತ್ ನ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ.ಶೆಟ್ಟಿ ಅವರು ಪುಣೆಯ ಸಿಂಬಯೋಸಿಸ್ ಗೋಲ್ಡನ್ ಜುಬಿಲಿ ಉಪನ್ಯಾಸ ಸರಣಿಯಲ್ಲಿ ತಮ್ಮ ಆನ್‌ಲೈನ್ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಪ್ರತಿ ರೋಗಿಯ ಮನೆಯಲ್ಲಿ ಕನಿಷ್ಠ 5 ರಿಂದ 10 ಜನರಿರುತ್ತಾರೆ. ಆದರೆ ಅವರು ಪರೀಕ್ಷೆಗೆ ಒಳಗಾಗುವುದಿಲ್ಲ. ಇದನ್ನು ಲೆಕ್ಕಾಚಾರ ಮಾಡಿದರೆ ಭಾರತದಲ್ಲಿ ಈಗಲೂ ಪ್ರತಿದಿನ 15 ರಿಂದ 20 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರು.

Join Whatsapp