ಕೋವಿಡ್ 19 ವಿರುದ್ಧ ಜಾಗೃತಿ ಕಾಲರ್ ಟ್ಯೂನ್ | ಅಮಿತಾಭ್ ಧ್ವನಿ ತೆಗೆದು ಹಾಕಲಾಗಿದೆ | ದಿಲ್ಲಿ ಹೈಕೋರ್ಟ್

Prasthutha|

ಕೋರೋನ ವೈರಸ್ ವಿರುದ್ಧ ಮುನ್ನೆಚ್ಚರಿಕೆಯ ಕುರಿತಾದ ಕಾಲರ್ ಟ್ಯೂನ್ ನಿಂದ ಮೇಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಧ್ವನಿಯನ್ನು ತೆಗೆದು ಹಾಕಲಾಗಿದೆ ಮತ್ತು ಇದರ ನಂತರ ಅದನ್ನು ತೆಗೆದು ಹಾಕಬೇಕೆಂದು ಕೋರಿರುವ ಪಿಐಎಲ್ ನಲ್ಲಿ ಏನೂ ಉಳಿದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ಹೇಳಿದೆ.

- Advertisement -

ಅರ್ಜಿದಾರ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಾಧೀಶ ಜ್ಯೋತಿ ಸಿಂಗ್ ರನ್ನೊಳಗೊಂಡ ಪೀಠದ ಮುಂದೆ ಅರ್ಜಿಯನ್ನು ಸಲ್ಲಿಸಿದ್ದು, ಕಾಲರ್ ಟ್ಯೂನ್ ನಿಂದ ನಟನ ಧ್ವನಿಯನ್ನು ತೆಗೆದು ಹಾಕುವುದರೊಂದಿಗೆ ತನ್ನ ಅರ್ಜಿಯು ಫಲಪ್ರದವಾಗಿದೆ ಎಂದು ಹೇಳಿದರು.

ನಟ ತನ್ನ ಕೆಲವು ಕುಟುಂಬ ಸದಸ್ಯರೊಂದಿಗೆ ಸ್ವತಃ ಸೋಂಕಿಗೆ ಒಳಗಾಗಿದ್ದರು ಎಂಬ ಆಧಾರದಲ್ಲಿ ನಟನ ಧ್ವನಿ ಸುರುಳಿಯನ್ನು ತೆಗೆದುಹಾಕಬೇಕೆಂದು ಅರ್ಜಿದಾರ ಆಗ್ರಹಿಸಿದ್ದರು.

Join Whatsapp