Home ಟಾಪ್ ಸುದ್ದಿಗಳು ‘ಕಾಂಗ್ರೆಸ್‌ಗೆ ಹಿಂದೂ ದೇವರುಗಳು ಬೇಕಾಗಿಲ್ಲ’ – ಪಠ್ಯಪುಸ್ತಕ ವಿವಾದದ ವಿರುದ್ಧ ಆರ್ ಅಶೋಕ್ ಕಿಡಿ

‘ಕಾಂಗ್ರೆಸ್‌ಗೆ ಹಿಂದೂ ದೇವರುಗಳು ಬೇಕಾಗಿಲ್ಲ’ – ಪಠ್ಯಪುಸ್ತಕ ವಿವಾದದ ವಿರುದ್ಧ ಆರ್ ಅಶೋಕ್ ಕಿಡಿ

ಬೆಂಗಳೂರು: ‘ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಠ್ಯಪುಸ್ತಕದ ಪಠ್ಯಕ್ರಮವನ್ನು ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ತಮಗಿಷ್ಟ ಬಂದಹಾಗೆ ಬದಲಾಯಿಸಿದೆ’ ಎಂದು ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದ ಕುರಿತು ಕಾಂಗ್ರೆಸ್ ವಿರುದ್ಧ ಕಂದಾಯ ಸಚಿವ, ಬಿಜೆಪಿ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.

ಆರ್ ಅಶೋಕ್ ಮಾತನಾಡಿ ‘ಕಾಂಗ್ರೆಸ್‌ ಪಕ್ಷಕ್ಕೆ ಪಠ್ಯಕ್ರಮದಲ್ಲಿ ಹಿಂದೂ ದೇವರುಗಳು, ನೈಜ ಸ್ವಾತಂತ್ರ್ಯ ಹೋರಾಟಗಾರರ ಅಳವಡಿಸುವಿಕೆ ಬೇಕಾಗಿಲ್ಲ. ಅನಗತ್ಯವಾಗಿ ಇಲ್ಲಸಲ್ಲದ ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಂದಕ್ಕೆ ಮಾತನಾಡಿದ ಅವರು ‘ ಪಠ್ಯಪುಸ್ತಕದಲ್ಲಿ ‘ಹಿಂದೂ’ ಎಂಬ ಪದವನ್ನು ಅಳಿಸಿ ಹಾಕಲು ಕಾಂಗ್ರೆಸ್ ಬಯಸಿದೆ. ಅದಕ್ಕಾಗಿಯೇ ಪಠ್ಯಕ್ರಮದಿಂದ ಶ್ರೀರಾಮ ಮತ್ತು ಶಿವನ ಹೆಸರನ್ನು ತೆಗೆದುಹಾಕಲು ಕಾಂಗ್ರೆಸ್ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ರಚಿಸಿದೆ’ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.

Join Whatsapp
Exit mobile version