Home ಟಾಪ್ ಸುದ್ದಿಗಳು ಕಷ್ಟ ಬಂದರೆ ಮಾತ್ರ ನಿಮಗೆ ಸಂತೋಷವನ್ನು ಆನಂದಿಸಲು ಸಾಧ್ಯ; ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಸಚಿವ

ಕಷ್ಟ ಬಂದರೆ ಮಾತ್ರ ನಿಮಗೆ ಸಂತೋಷವನ್ನು ಆನಂದಿಸಲು ಸಾಧ್ಯ; ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಸಚಿವ

ಭೋಪಾಲ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನ ತತ್ತರಿಸಿರುವಾಗಲೇ ಬಿಜೆಪಿ ನಾಯಕರ ಬೇಜವಾಬ್ದಾರಿಯುತ ಹೇಳಿಕೆಗಳು ಜನರನ್ನು ಮತ್ತಷ್ಟು ಆಕ್ರೋಶಕ್ಕೆ ಒಳಗಾಗುವಂತೆ ಮಾಡುತ್ತಿದೆ.


ಮಧ್ಯಪ್ರದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಓಂ ಪ್ರಕಾಶ್ ಸಕ್ಲೇಚಾ ಅವರು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ತಪ್ಪೇನೂ ಇಲ್ಲ, ‘ಸಂಕಷ್ಟವಿದ್ದರೆ ಮಾತ್ರವೇ ನಿಮಗೆ ಸಂತೋಷವನ್ನು ಆನಂದಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.


‘ಸಂಕಷ್ಟಗಳು ನಿಮಗೆ ಒಳ್ಳೆಯ ಕ್ಷಣಗಳ ಸಂತೋಷವನ್ನು ಅರ್ಥಮಾಡಿಸುತ್ತವೆ. ಒಂದು ವೇಳೆ ಯಾವುದೇ ಕಷ್ಟವಿಲ್ಲ ಎಂದಾದರೆ, ನೀವು ಸಂತೋಷವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ’ ಎಂದು ಸಚಿವರು ಹೇಳಿದ್ದಾರೆ.
ದೇಶಾದ್ಯಂತ ತೈಲ ಬೆಲೆ ಏರಿಕೆ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿಯ ಉತ್ತರ ನೀಡಿದ್ದಾರೆ.
ಸಂಪುಟ ಸದಸ್ಯನ ಹೇಳಿಕೆಯಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುಜುಗರ ಪಡುವಂತಾಗಿದೆ.

ಇತ್ತೀಚೆಗೆ ಇಂಧನ ಸಚಿವ ಪ್ರದ್ಯುಮ್ ಸಿಂಗ್ ತೋಮರ್ ಕೂಡ ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದು, ನಾವು ಇನ್ನು ಮುಂದೆ ಸೈಕಲ್ ಬಳಸಲು ಈ ಬೆಲೆ ಏರಿಕೆ ಸಹಕಾರಿಯಾಗಿದೆ. ಸೈಕಲ್ ಬಳಕೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಎಂದು ಹೇಳಿಕೆ ನೀಡಿದ್ದರು.

Join Whatsapp
Exit mobile version