Home ಕರಾವಳಿ ಉಳ್ಳಾಲ ಸೋಮೇಶ್ವರ ದೇವಸ್ಥಾನದಲ್ಲಿ ಆದೇಶ ಉಲ್ಲಂಘಿಸಿ ಬ್ರಹ್ಮಕಲಶೋತ್ಸವ : ಅಸಿಸ್ಟಂಟ್ ಕಮಿಷನರ್ ನೇತೃತ್ವದಲ್ಲಿ ದಾಳಿ...

ಉಳ್ಳಾಲ ಸೋಮೇಶ್ವರ ದೇವಸ್ಥಾನದಲ್ಲಿ ಆದೇಶ ಉಲ್ಲಂಘಿಸಿ ಬ್ರಹ್ಮಕಲಶೋತ್ಸವ : ಅಸಿಸ್ಟಂಟ್ ಕಮಿಷನರ್ ನೇತೃತ್ವದಲ್ಲಿ ದಾಳಿ !

ಮಂಗಳೂರು : ಸರಕಾರದ ಆದೇಶವನ್ನು ಉಲ್ಲಂಘಿಸಿ ಉಲ್ಳಾಲದ ಸೋಮೇಶ್ವರ ದೆವಸ್ಥಾನ ಆಡಳಿತ ಸಮಿತಿಯು ನಡೆಸಿದ ಬ್ರಹ್ಮ ಕಲಶೋತ್ಸವಕ್ಕೆ ಕಂದಾಯ ಇಲಾಖೆ ಮಂಗಳೂರು ಉಪ ವಿಭಾಗದ ಎಸಿ ಮದನ್ ಮೋಹನ್ ದಾಳಿ ನಡೆಸಿ ಕಾರ್ಯಕ್ರಮ ನಡೆಸದಂತೆ ಸೂಚಿಸಿದ ಘಟನೆ ನಡೆದಿದೆ.

ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮಂಗಳೂರು ತಹಶೀಲ್ದಾರ್ ನೀಡಿದ್ದ ನೋಟೀಸನ್ನು ಕೂಡ ಕ್ಯಾರೇ ಅನ್ನದೆ ದೇವಸ್ಥಾನದ ಡಳಿತ ಸಮಿತಿಯು ಮೆರವಣಿಗೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 269ರ ಅಡಿಯಲ್ಲಿ ಪ್ರಕರನ ಕೂಡ ದಾಖಲಾಗಿತ್ತು ಎನ್ನಲಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ನಡುವೆಯೂ ಅಪಾರ ಜನರನ್ನು ಸೇರಿಸಿ ನಡೆಸುತ್ತಿರುವ ಬ್ರಹ್ಮ ಕಲಶೋತ್ಸವಕ್ಕೆ ಎಸಿ ಮದನ್ ಅವರು ದಾಳಿ ನಡೆಸಿ ಕಾರ್ಯಕ್ರಮ ನಡೆಸದಂತೆ ಸೂಚಿಸಿದ್ದಾರೆ.

ದಾಳಿಯ ಸಂದರ್ಭ ಸೋಮೇಶ್ವರ ಗ್ರಾಮ ಕರಣಿಕರಾದ ಲಾವಣ್ಯ, ಮುಖ್ಯಾಧಿಕಾರಿ ವಾಣಿ ಆಳ್ವ ಸೇರಿದಂತೆ ಮತ್ತಿತರರು ಇದ್ದರು.

Join Whatsapp
Exit mobile version