ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಭ್ರಷ್ಟಾಚಾರ ಕೇಸ್ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

Prasthutha|

ನವದೆಹಲಿ : ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದ್ದ ಅಲ್ಲಿನ ಹೈಕೊರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ್ಯಾಯಾಲಯವು ಈ ಸಂಬಂಧ ಸಿಬಿಐ ಮತ್ತು ಇಬ್ಬರು ಪತ್ರಕರ್ತರಿಗೆ ನೋಟಿಸ್ ನೀಡಿದ್ದು, ತಿಂಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

- Advertisement -

ತನಿಖೆಗೆ ಆದೇಶಿಸುವುದಕ್ಕೂ ಮೊದಲು ಹೈಕೋರ್ಟ್ ತನ್ನ ವಿಚಾರಣೆ ನಡೆಸಿಲ್ಲ. ವಿಚಾರಣೆ ನಡೆಸದೆಯೇ ಸ್ವಯಂ ಪ್ರೇರಿತ ಆದೇಶ ನೀಡಬಹುದೇ? ಎಂದು ರಾವತ್ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು.

ಉತ್ತರಾಖಂಡ ಹೈಕೋರ್ಟ್ ಮಂಗಳವಾರ ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆಗೆ ಸಿಬಿಐಗೆ ಆದೇಶಿಸಿತ್ತು. 2016ರಲ್ಲಿ ರಾವತ್ ಬಿಜೆಪಿ ಮುಖ್ಯಸ್ಥರಾಗಿದ್ದಾಗ, ತನ್ನ ಸಂಬಂಧಿಯ ಖಾತೆಗೆ ಹಣ ವರ್ಗಾಯಿಸಿದ್ದುದಕ್ಕೆ ಸಂಬಂಧಿಸಿ ವೀಡಿಯೊವೊಂದನ್ನು ಹೊಂದಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆ ‘ಸಮಾಚಾರ್ ಪ್ಲಸ್’ ಮಾಲಕ ಉಮೇಶ್ ಶರ್ಮಾ ಆರೋಪಿಸಿದ್ದರು.

Join Whatsapp