ಶಿರಾ ಉಪಚುನಾವಣೆ | ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ತಡೆ | ಪಕ್ಷೇತರ ಅಭ್ಯರ್ಥಿಯಿಂದ ಪ್ರತಿಭಟನೆ

Prasthutha|

ತುಮಕೂರು : ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಆಂಬ್ರೋಸ್ ಡಿ.ಮೆಲ್ಲೊ ಅವರು, ತಮಗೆ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಬಿಡುತ್ತಿಲ್ಲ ಎಂದು ಆಪಾದಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

- Advertisement -

ಮಂಗಳವಾರ ತುಮಕೂರು ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಪಕ್ಷೇತ್ರ ಅಭ್ಯರ್ಥಿ ಆಂಬ್ರೋಸ್ ಡಿ.ಮೆಲ್ಲೊ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಡಿವೈಎಸ್ ಪಿ ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯನ್ನು ಮತ ಕೇಂದ್ರಕ್ಕೆ ಕಳುಹಿಸಿಕೊಟ್ಟರು, ಇದರಿಂದಾಗಿ ಪರಿಸ್ಥಿತಿ ಸರಿಯಾಯಿತು.

ನೀರು ಮಾರಾಟ, ನೋಟು ಬ್ಯಾನ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಆಂಬ್ರೋಸ್ ಹಲವು ವರ್ಷಗಳಿಂದ ಮೌನ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ದೀರ್ಘಕಾಲೀನ ಮೌನ ಪ್ರತಿಭಟನೆಗಾಗಿ ಜನರಿಗೆ ಚಿರಪರಿಚಿತರಾಗಿರುವ ಆಂಬ್ರೊಸ್ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.

Join Whatsapp