ಮುಂಬೈ ಪೊಲೀಸ್ ಆಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ರಿಪಬ್ಲಿಕ್ ಟಿವಿ; 200 ಕೋಟಿ ರೂ. ನಷ್ಟ ಪರಿಹಾರ ಬೇಡಿಕೆ

Prasthutha|

ಮುಂಬೈ,ಅ.19: ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಮತ್ತು ಅದರ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಯವರು ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿಯ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ಆರೋಪಿಸಿ 200 ಕೋಟಿ ನಷ್ಟವನ್ನು ಕೋರಿದ್ದಾರೆ.

ಟಿಆರ್‌ಪಿ ಪ್ರಕರಣದ ಎಫ್‌ಐಆರ್‌ನಲ್ಲಿ ರಿಪಬ್ಲಿಕ್ ನೆಟ್‌ವರ್ಕ್ ಹೆಸರಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಚಾನೆಲ್ ಪ್ರಕಟಣೆ ತಿಳಿಸಿದೆ.

Join Whatsapp