ಬಸವ ಕಲ್ಯಾಣ ಶಾಸಕ ನಾರಾಯಣ ರಾವ್ ಕೊರೋನಾಗೆ ಬಲಿ

Prasthutha|

ಬೀದರ್ ಜಿಲ್ಲೆಯ ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ (65) ಅವರು ಕೊರೋನಾ ಕಾರಣದಿಂದ ನಿಧನರಾಗಿದ್ದಾರೆ.  ನಾರಾಯನ ರಾವ್ ಅವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

- Advertisement -

ನಾರಾಯಣ ರಾವ್ ಅವರ ಆರೋಗ್ಯದಲ್ಲಿ  ಆಗಸ್ಟ್ 31 ರಂದು ಏರುಪೇರು ಉಂಟಾಗಿತ್ತು. ಸೆಪ್ಟಂಬರ್ 1 ರಂದು ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.

 ಒಂದೇ ವಾರದಲ್ಲಿ ಮೂರನೇ ಜನಪ್ರತಿನಿಧಿ ಕೊರೋನಾಗೆ ಬಲಿಯಾದಂತಾಗಿದೆ

Join Whatsapp