ಕರ್ನಾಟಕ ಉಪ ಚುನಾವಣೆ | ಭರ್ಜರಿ ಗೆಲುವಿನತ್ತ ಬಿಜೆಪಿ | ಸಿಎಂ ನಿವಾಸದಲ್ಲಿ ಸಿಹಿ ಹಂಚಿದ ನಾಯಕರು

Prasthutha|

ಬೆಂಗಳೂರು : ರಾಜ್ಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ ಪಕ್ಷದ ಮುಖಂಡರಲ್ಲಿ ಗೆಲುವಿನ ಸಂಭ್ರಮ ಕಂಡು ಬಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸರಕಾರದ ಹಿರಿಯ ಸಚಿವರ ಸಮ್ಮುಖದಲ್ಲಿ ಸಿಹಿ ಹಂಚಿ ಪಕ್ಷದ ಮುಖಂಡರು ಸಂಭ್ರಮಿಸಿದ್ದಾರೆ.

- Advertisement -

ಆರ್.ಆರ್. ಕೇತ್ರದಲ್ಲಿ ಮುನಿರತ್ನ ಅವರು ಭಾರೀ ಮುನ್ನಡೆ ಸಾಧಿಸಿದ್ದು, ಶಿರಾದಲ್ಲೂ ಬಿಜೆಪಿ ಅಭ್ಯರ್ಥಿಯೇ ಮುನ್ನಡೆಯಲ್ಲಿರುವುದು ಬಿಜೆಪಿ ಮುಖಂಡರಲ್ಲಿ ಖುಷಿಯ ಅಲೆ ಹರಡುವಂತೆ ಮಾಡಿದೆ.

ಬೆಂಗಳೂರಿನ ಸಿಎಂ ನಿವಾಸದಲ್ಲಿ ಬಿ.ಶ್ರೀರಾಮುಲು, ಆರ್. ಅಶೋಕ್, ಬಸವರಾಜ್ ಬೊಮ್ಮಾಯಿ ಮತ್ತು ಇತರ ಬಿಜೆಪಿ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಎಲ್ಲಾ ನಾಯಕರು ಸಿಹಿ ಹಂಚಿ ಸಂಭ್ರಮದಲ್ಲಿ ಭಾಗಿಯಾದರು.  

- Advertisement -

ಫೋಟೊ ಕೃಪೆ : ANI

Join Whatsapp