ದ್ವೇಷ ಟ್ವೀಟ್ | ಎಫ್ ಐಆರ್ ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ, ರಂಗೋಲಿ

Prasthutha|

ಮುಂಬೈ : ತಮ್ಮ ಕೋಮು ದ್ವೇಷ ಸಂದೇಶದ ಟ್ವೀಟ್ ಗಳ ವಿರುದ್ಧದ ಆರೋಪದ ತನಿಖೆಗೆ ಆದೇಶಿಸಿರುವ ಬಾಂದ್ರಾ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರ ಆದೇಶದ ಹಿನ್ನೆಲೆಯಲ್ಲಿ, ಮುಂಬೈ ಪೊಲೀಸರು ದಾಖಲಿಸಿರುವ ಎಫ್ ಐಆರ್ ರದ್ದತಿಗೆ ಕೋರಿ, ಬಾಲಿವುಡ್ ನಟಿ ಸಹೋದರಿಯರಾದ ಕಂಗನಾ ರಣಾವತ್ ಮತ್ತು ರಂಗೋಲಿ ಚಾಂಡೇಲ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

- Advertisement -

ಮುನ್ನಾವರಲಿ ಸಯ್ಯದ್ ಎಂಬವರು ನೀಡಿರುವ ದೂರಿನ ಆಧಾರದಲ್ಲಿ ತನಿಖೆ ನಡೆಸುವಂತೆ ಸ್ಥಳೀಯ ಕೋರ್ಟ್ ಮುಂಬೈ ಪೊಲೀಸರಿಗೆ ಆದೇಶಿಸಿತ್ತು.

ಮುಂಬೈ ಪೊಲೀಸರು ಜಾರಿಗೊಳಿಸಿರುವ ಸಮನ್ಸ್ ರದ್ದುಗೊಳಿಸಿ, ಮಧ್ಯಂತರ ಆದೇಶ ನೀಡುವಂತೆ ನ್ಯಾಯವಾದಿ ರಿಝ್ವಾನ್ ಸಿದ್ದೀಕಿ ನಟಿಯರ ಪರ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

- Advertisement -

ಮುಂಬೈ ಪೊಲೀಸರು ನಟಿಯರ ವಿರುದ್ಧ ಎರಡು ಬಾರಿ ಸಮನ್ಸ್ ಜಾರಿಗೊಳಿಸಿದ್ದರು. ಆದರೆ, ತಾವು ಕುಟುಂಬ ಸದಸ್ಯರ ವಿವಾಹದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿರುವುದಾಗಿ ಹೇಳಿ ಅವರು ಉತ್ತರಿಸಿದ್ದರು. ಹೀಗಾಗಿ ಪೊಲೀಸರು ಮೂರನೇ ಬಾರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.  

Join Whatsapp