ಟಿಎಂಸಿ ಕಾರ್ಯಕರ್ತರ ಕೈ, ಕಾಲು ಮುರಿಯಬೇಕಾದೀತು ಎಂದಿದ್ದ ಪ.ಬಂ. ಬಿಜೆಪಿ ಅಧ್ಯಕ್ಷನ ಮೇಲೆಯೇ ದಾಳಿ

Prasthutha|

ಕೊಲ್ಕತಾ : ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕೈಕಾಲು ಮುರಿಯಬೇಕಾದೀತು, ಹತ್ಯೆಯೂ ನಡೆದೀತು ಎಂದು ಬೆದರಿಕೆಯೊಡ್ಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮೇಲೆಯೇ ಇಂದು ದಾಳಿ ನಡೆದಿದೆ.

- Advertisement -

ದಿಲೀಪ್ ಘೋಷ್ ಅವರ ಬೆಂಗಾಲು ವಾಹನದ ಮೇಲೆ ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯಲ್ಲಿ ಪ್ರತಿಭಟನಕಾರರ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಪ್ರತಿಭಟನಕಾರರು ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

ದಾಳಿಯ ವೇಳೆ ಕಾಲ್ಚಿನಿ ಶಾಸಕ ವಿಲ್ಸನ್ ಚಂಪಾಮರಿ ಅವರಿದ್ದ ವಾಹನಕ್ಕೆ ಹಾನಿಯಾಗಿದೆ. ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇಲ್ಲಿ ವರೆಗೆ ಪತ್ತೆಯಾಗಿಲ್ಲ.

- Advertisement -

ಪ್ರತಿಭಟನಕಾರರು ಕಪ್ಪು ಬಾವುಟ ಪ್ರದರ್ಶಿಸಿದರಲ್ಲದೆ, ‘ಗೋ ಬ್ಯಾಕ್ (ಹಿಂದಕ್ಕೆ ಹೋಗಿ)’ ಘೋಷಣೆಗಳು ಮೊಳಗಿದವು ಎಂದು ‘ಎಎನ್ ಐ’ ವರದಿ ಮಾಡಿದೆ.  

ಫೋಟೊ ಕೃಪೆ : ANI

Join Whatsapp