ದೆಹಲಿ ಗಲಭೆಯ ಮಾಹಿತಿಯಿದ್ದವರು ತಮಗೆ ಕೊಡುವಂತೆ ಮಾಜಿ ನ್ಯಾಯಮೂರ್ತಿಗಳು, ಅಧಿಕಾರಿಗಳ ಸಮಿತಿಯ ಕರೆ

Prasthutha|

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಗಲಭೆಗೆ ಸಂಬಂಧಿಸಿದ ವಿವರಗಳಿದ್ದರೆ ಕಳುಹಿಸಿಕೊಡುವಂತೆ ಜನತೆಗೆ ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಇರುವ ಸಮಿತಿಯೊಂದು ಮನವಿ ಮಾಡಿದೆ. ಗಲಭೆಗೆ ಸಂಬಂಧಿಸಿ ಸತ್ಯಶೋಧನೆಗಾಗಿ ಈ ಸಮಿತಿ ರಚಿಸಲಾಗಿದೆ.

- Advertisement -

ಕಳುಹಿಸಿದ ಮಾಹಿತಿ ಆಧಾರದಲ್ಲಿ ಕೆಲವು ವ್ಯಕ್ತಿಗಳನ್ನು ಕರೆಸಿ ಸಮಿತಿಯು ಮಾತುಕತೆ ಮಾಡಬಹುದು. ಮಾಹಿತಿದಾರರ ಪರಿಚಯ ಗುಪ್ತವಾಗಿ ಇಡಲಾಗುವುದು. ವಿವರಗಳನ್ನು ಕಳುಹಿಸಲು ಕೊನೆಯ ದಿನಾಂಕ ನ.30 ಆಗಿದೆ.

ಕಾನ್ಸ್ ಟಿಟ್ಯೂಶನಲ್ ಕಾಂಡಕ್ಟ್ ಗ್ರೂಪ್ (ಸಿಸಿಜಿ)ಯು ದೆಹಲಿ ಗಲಭೆಗೆ ಸಂಬಂಧಿಸಿದ ಸತ್ಯಶೋಧನೆಗೆ ಈ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕುರ್, ದೆಹಲಿ ಮತ್ತು ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ, ದೆಹಲಿ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಆರ್.ಎಸ್. ಸೋಧಿ, ಪಾಟ್ನಾ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಅಂಜನಾ ಪ್ರಕಾಶ್, ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಮುಂತಾದ ಪ್ರಮುಖರು ಇದ್ದಾರೆ.

- Advertisement -

Constitutional Conduct Group (CCG), Common Cause House, 2nd Floor, Nelson Mandela Marg, Vasant Kunj, New Delhi – 110070 ಈ ವಿಳಾಸಕ್ಕೆ ಮಾಹಿತಿ ಕಳುಹಿಸಿಕೊಡುವವರು ಕಳುಹಿಸಬಹುದು.

Join Whatsapp