ತಪ್ಪೊಪ್ಪಿಕೊಳ್ಳಲು ಒತ್ತಾಯಿಸಿ ಆರೋಪಿಯ ಖಾಸಗಿ ಅಂಗಗಳಿಗೆ ಪೊಲೀಸರಿಂದ ವಿದ್ಯುತ್ ಶಾಕ್!

Prasthutha|

ಕಳ್ಳತನ ಪ್ರಕರಣದ ಆರೋಪಿಯೋರ್ವನ ಖಾಸಗಿ ಅಂಗಗಳಿಗೆ ಪೊಲೀಸ್ ಅಧಿಕಾರಿಯೋರ್ವ ವಿದ್ಯುದಾಘಾತ ನೀಡಿದ ಘಟನೆ ಜಾರ್ಖಂಡ್ ನ ಮೆದಿನಿ ನಗರದಲ್ಲಿ ನಡೆದಿದೆ.

- Advertisement -

ಕಳ್ಳತನ ಪ್ರಕರಣದಲ್ಲಿ ತಪ್ಪೊಪ್ಪಿಗೆ ಪಡೆಯುವುದಕ್ಕಾಗಿ ಆರೋಪಿಗೆ ವಿದ್ಯುದಾಘಾತ ನೀಡಿದ ಪ್ರಕರಣ ಬೆಳಕಿಗೆ ಬರುವುದರೊಂದಿಗೆ ರವಿವಾರದಂದು  ಜಾರ್ಖಂಡ್ ನ ಪಲಾಮು ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ ಎಂದು ಪಿಟಿಐ ವರದಿ ಮಾಡಿದೆ.

ಚೈನ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ. ಠಾಣೆಯ ಎಸ್.ಎಚ್.ಒ ಸುಮಿತ್ ಕುಮಾರ್ ಆರೋಪಿಗೆ ವಿದ್ಯುದಾಘಾತ ನೀಡಿರವುದಾಗಿ ದೂರು ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಸೋನುಪುರ್ವ ಗ್ರಾಮದ ರಜನೀಕಾಂತ್ ದುಬೆ (35) ಎಂಬಾತನನ್ನು ಪೊಲೀಸರು ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 8 ರಂದು ಬಂಧಿಸಿ, ದೌರ್ಜನ್ಯವೆಸಗಿದ್ದರು.

ಪ್ರಕರಣದ ತಪ್ಪೊಪ್ಪಿಕೊಳ್ಳುವಂತೆ ಎಸ್.ಎಚ್.ಒ ತನಗೆ ಒತ್ತಡ ಹೇರಿದ್ದು, ನಿರಾಕರಿಸಿದ್ದಕ್ಕಾಗಿ ಮರುದಿನ ಬಿಡುಗಡೆಗೊಳಿಸಲಾಯಿತು. ಘಟನೆಯ ಕುರಿತು ಯಾರಿಗಾದರೂ ಹೇಳಿದರೆ ಪರಿಣಾಮವು ನೆಟ್ಟಗಿರದು ಎಂದು ತನಗೆ ಬೆದರಿಕೆ ಹಾಕಲಾಗಿತ್ತು ಎಂದು ರಜನೀಕಾಂತ್ ದುಬೆ ಹೇಳಿದ್ದಾನೆ.

Join Whatsapp