ಹಾಸನ | ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರಿಂದ ರಕ್ತದಾನ

Prasthutha|

ಹಾಸನ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಸನ ಘಟಕದ ವತಿಯಿಮದ ರಕ್ತದಾನ ಶಿಬಿರ ನಡೆಯಿತು. ಜೀವರಕ್ಷಾ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 60 ಮಂದಿ ರಕ್ತ ದಾನ ಮಾಡಿದರು.

- Advertisement -

ಗೌಸಿಯಾ ಮಸೀದಿ ಗುರುಗಳಾದ ಸಯೇದ್ ಅಕ್ಬರ್, ಮಸೀದಿ ಅಧ್ಯಕ್ಷರಾದ ಇಲ್ಯಾಸ್, ಜೀವರಕ್ಷಾ ಬ್ಲಡ್ ಬ್ಯಾಂಕ್ ಮೋಹನ್, ಪಾಪ್ಯುಲರ್ ಫ್ರಂಟ್ ಜಿಲ್ಲಾ ಅಧ್ಯಕ್ಷರಾದ ಸೂಫಿ ಇಬ್ರಾಹಿಂ, ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯರಾದ ಶಾಜೀಲ್ ಅಹ್ಮದ್, ಸಯೇದ್ ಫರೀದ್,  ಕಾಝಿಮ್ ಅಹ್ಮದ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Join Whatsapp