ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ: ಪ್ರವಾದಿ ನಿಂದನೆ ಪೋಸ್ಟ್ ಹಾಕಿದ ಆರೋಪಿ ನವೀನ್ ಗೆ ಜಾಮೀನು

Prasthutha|

ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಯಲ್ಲಿ ಗಲಭೆಗೆ ಕಾರಣವಾದ ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡುವ ವ್ಯಂಗ್ಯ ಚಿತ್ರ ವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪಿ ನವಿನ್ ಗೆ ಏಕ ಸದಸ್ಯ ಪೀಠ ಜಾಮೀನು ನೀಡಿದೆ.

- Advertisement -

ನವೀನ್ ಗೆ ಪ್ರಾಣ ಬೆದರಿಕೆ ಇರುವುದರಿಂದ ಜಾಮೀನು ನೀಡಬಾರದೆಂದು ಎಸ್.ಪಿ.ಪಿ ವಾದ ಮಂಡಿಸಿದ್ದರು.

ಈ ಕಾರಣಕ್ಕಾಗಿ ಜಾಮೀನು ನಿರಾಕರಿಸುವಂತಿಲ್ಲ. ಫೇಸ್ಬುಕ್ ಪೋಸ್ಟನ್ನು ಆತ ಡಿಲೀಟ್ ಮಾಡಿದ್ದಾನೆ. ಕಠಿಣ ಷರತ್ತಿನ ಮೇರೆಗೆ ಜಾಮೀನು ನೀಡಲಾಗುವುದು. ಮುಂದೆ ಇಂಥಹ ಕೃತ್ಯದಲ್ಲಿ ತೊಡಗಿಸಿಕೊಂಡರೆ ಜಾಮೀನು ಹಿಂದೆಗೆಯಬಹುದಾಗಿದೆ ಎಂದು ನ್ಯಾ.ಬಿ.ಎ.ಪಾಟೀಲ್ ಅವರ ಏಕಸದಸ್ಯ ಪೀಠ ಹೇಳಿದೆ.

Join Whatsapp