ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ

Prasthutha|

ಬಂಟ್ವಾಳ: ಬಲಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ  ರೌಡಿ ಶೀಟರ್, ಚಾಲಿ ಪೋಲಿಲು ಚಿತ್ರದ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ್ ರನ್ನು ಬುಧವಾರದಂದು ಹತ್ಯೆ ಮಾಡಲಾಗಿದೆ.

- Advertisement -

2018ರಲ್ಲಿ ಬಡ್ಡಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕತ್ತಿಯಿಂದ ಹಲ್ಲೆ ಮಾಡಿದ ಆರೋಪ ಸುರೇಂದ್ರರ ಮೇಲಿತ್ತು.

ಸುರೇಂದ್ರ ಇತರರೊಂದಿಗೆ ಸೇರಿ ಜೂ.11ರಂದು ರೆಸ್ಟಾರೆಂಟ್ ವೊಂದರಲ್ಲಿ ಪುಷ್ಪರಾಜ, ಗಣೇಶ್, ಚರಣ್ ಮತ್ತು ಇತರರ ಮೇಲೆ ಹಲ್ಲೆ ನಡೆಸಿದ್ದರು. ಜೂನ್ 10ರಂದು ಸೆಲೂನ್ ವೊಂದರಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಬಜರಂಗದಳ ಕಾರ್ಯಕರ್ತ ಭುವಿತ್ ಶೆಟ್ಟಿ ಗ್ಯಾಂಗ್ ಮೇಲೆ ಈ ದಾಳಿ ನಡೆದಿತ್ತು ಎನ್ನಲಾಗಿದೆ. ಜೂನ್ 11ರ ದಾಳಿಯ ವೀಡಿಯೊ ವೈರಲ್ ಆಗಿತ್ತು.

Join Whatsapp